Sunday, May 5, 2024
Homeಕರಾವಳಿಬೆಳ್ತಂಗಡಿ : ಮಾನಸಿಕ ಅಸ್ವಸ್ಥ ರಾಜ್ಯವನ್ನೇ ದಾಟಿ ಬಂದ ಪ್ರಕರಣ: ಯುವಕನನ್ನು ಭೇಟಿ ಮಾಡಿದ ಧರ್ಮಸ್ಥಳ...

ಬೆಳ್ತಂಗಡಿ : ಮಾನಸಿಕ ಅಸ್ವಸ್ಥ ರಾಜ್ಯವನ್ನೇ ದಾಟಿ ಬಂದ ಪ್ರಕರಣ: ಯುವಕನನ್ನು ಭೇಟಿ ಮಾಡಿದ ಧರ್ಮಸ್ಥಳ ಪೊಲೀಸರು

spot_img
- Advertisement -
- Advertisement -

ಬೆಳ್ತಂಗಡಿ : ಮುಂಡಾಜೆ ಗ್ರಾಮದ ಸೋಮಂತ್ತಡ್ಕ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಸಂಗಮ್ ಹೋಟೆಲಿನಲ್ಲಿ ಊರು ,ಹೆಸರು ತಿಳಿಯದ ಮಾನಸಿಕ ಅಸ್ವಸ್ಥ ಕಳೆದ ಮೂರು ವರ್ಷಗಳಿಂದ ಆಶ್ರಯ ಪಡೆದಿದ್ದು. ಆತನ ಮನೆಯವರಿಗಾಗಿ ಸ್ಥಳೀಯ ತಂಡ ಹುಡುಕಾಟ ನಡೆಸುವ ಬಗ್ಗೆ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ವಿಶೇಷ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಹೋಟೆಲ್ ಗೆ ಆಗಮಿಸಿ ಧರ್ಮಸ್ಥಳ ಪೊಲೀಸರು ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್‌ ಕುಮಾರ್ ಮತ್ತು ತಂಡ ಆತನಿಂದ ಒಂದಷ್ಟು ಮಾಹಿತಿ ಕಲೆ ಹಾಕಿದೆ.

ಸಂಗಮ್ ಹೋಟೆಲ್‌ ಮಾಲೀಕ ಅಬ್ದುಲ್ ಲತೀಫ್ ಎಂಬವರಿಗೆ ಕಳೆದ ಮೂರು ವರ್ಷದ ಹಿಂದೆ ಸೋಮಂತ್ತಡ್ಕ ದಲ್ಲಿ ಪ್ರತಿದಿನ  ತಿರುಗಾಡುತ್ತಿದ್ದವನನ್ನು ಗಮನಿಸಿದ ಬಸ್ ಚಾಲಕ ನಾರಾಯಣ ಪೂಜಾರಿ ಮಾಹಿತಿ ಮಾಡಿದ್ದರು. ಅದರಂತೆ ಅಬ್ದುಲ್‌ ಲತೀಫ್ ವ್ಯಕ್ತಿಯ ಬಳಿಗೆ ಬಂದು ವಿಚಾರಿಸಿದಾಗ ಯಾವುದೇ ರೀತಿಯ ಸರಿಯಾದ ಮಾತುಗಳನ್ನು ಹೇಳುತ್ತಿರಲ್ಲಿಲ್ಲ ಅವನನ್ನು ಹೊಟೇಲ್ ಕರೆದುಕೊಂಡು ಬಂದು ರೂಂ ವ್ಯವಸ್ಥೆ ಮಾಡಿ ಪ್ರತಿದಿನ ಊಟ,ತಿಂಡಿ ನೀಡಿ ನೋಡಿಕೊಳ್ಳುತ್ತಿದ್ದರು ನಂತರ ಪ್ರತಿದಿನ ಹೊಟೇಲ್ ನಲ್ಲಿ ಕೆಲಸ ಮಾಡಲು ಆರಂಭಿಸಿದ್ದ. ಇದಕ್ಕೆ ಅವರು ಆತನ ತಿಂಗಳ ಸಂಬಳವನ್ನು ಖಾತೆಯೊಂದನ್ನು ಮಾಡಿ ಹಣವನ್ನು ಪ್ರತಿ ತಿಂಗಳು ಹಾಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆತನ ವರ್ತನೆಗಳಲ್ಲಿ ಬದಲಾವಣೆ ಬಂದಿರುವ ಕಾರಣ ಹೊಟೇಲ್ ಮಾಲೀಕ ಅಬ್ದುಲ್‌ ಲತೀಫ್ ಸ್ಥಳೀಯ ಸಮಾಜ ಸೇವಕ ಅಬ್ದುಲ್ ಅಜೀಜ್ ಅವರ ತಂಡದ ಸದಸ್ಯರಿಗೆ ಮಾಹಿತಿ ನೀಡಿ ಮರಳಿ ಕಳುಹಿಸಲು ಮಾಹಿತಿ ನೀಡಿದ್ದರು. ಅದರಂತೆ ಆತನ ಊರಿನ ಬಗ್ಗೆ ವಿಚಾರಿಸಿದಾಗ ಅಲ್ವ ಸ್ವಲ್ಪ ಮಾತುಗಳನ್ನು ಮಾತಾನಾಡುತ್ತಿದ್ದಾನೆ.

ಮಹಾಎಕ್ಸ್ ಪ್ರೆಸ್ ವಿಶೇಷ ವರದಿ: ಮಾನಸಿಕ ಅಸ್ವಸ್ಥನ ಬಗ್ಗೆ ಮುಂಡಾಜೆ ನಿವಾಸಿ ಅಬ್ದುಲ್ ಅಜೀಜ್  ಮಹಾಎಕ್ಸ್ ಪ್ರೆಸ್‌ ವೆಬ್ ಸೈಟ್ ತಂಡಕ್ಕೆ ಮಾಹಿತಿ ನೀಡಿದ್ದರು. ಅದರಂತೆ ನಮ್ಮ ತಂಡ ಹೊಟೇಲಿಗೆ ತೆರಳಿ ಆತನ ಬಗ್ಗೆ ಫೆ.21 ರಂದು “ರಾಜ್ಯವನ್ನೇ ದಾಟಿ ಬಂದ ಮಾನಸಿಕ ಅಸ್ವಸ್ಥ , ಮೂರು ವರ್ಷಗಳಿಂದ ಹೊಟೇಲಿನಲ್ಲಿ ಆಶ್ರಯ, ಮನೆಯವರನ್ನು ಸಂಪರ್ಕಿಸಲು ಶ್ರಮ ಪಡುತ್ತಿರುವ ಸ್ಥಳೀಯ ತಂಡ” ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿಯನ್ನು ಪ್ರಸಾರ ಮಾಡಿತ್ತು.

ಧರ್ಮಸ್ಥಳ ಪೊಲೀಸರ ತಂಡ ಭೇಟಿ: ಮಹಾ ಎಕ್ಸ್‌ಪ್ರೆಸ್‌ ವರದಿ ಪ್ರಸಾರವಾದ ಬೆನ್ನಲ್ಲೇ ಮಾಹಿತಿ ಪಡೆದ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್.ಡಿ ಮತ್ತು ತಂಡ ಸಂಗಮ್ ಹೊಟೇಲ್ ಗೆ ಆಗಮಿಸಿ ಆತನ ಬಳಿ ಮಾತನಾಡಿ ಮಾಹಿತಿ ಪಡೆದುಕೊಂಡರು. ನಂತರ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ರವರು ಜಾರ್ಖಂಡ್ ರಾಜ್ಯದ ಪೊಲೀಸ್ ಅಧಿಕಾರಿಯನ್ನು ಫೋನ್ ಮುಖಾಂತರ ಸಂಪರ್ಕಿಸಿ ಆತನ ಕುಟುಂಬ ಸದಸ್ಯರ ಪತ್ತೆಗೆ ಮನವಿ ಮಾಡಿದ್ದಾರೆ. ಈ ವೇಳೆ ಜಾರ್ಖಂಡ್ ಪೊಲೀಸರು ಕೂಡ ಆತನ ಕುಟುಂಬವನ್ನು ಪತ್ತೆ ಹಚ್ಚಿ ಆತನನ್ನು ಕುಟುಂಬದ ಜೊತೆ ಸೇರಿಸುವುದಕ್ಕೆ ನಾವು ಕೂಡ ಸಹಕರಿಸುವುದಾಗಿ ತಿಳಿಸಿದ್ದಾರೆ.

ಮನೋ ವೈದ್ಯರ ಬಳಿ ಚಿಕಿತ್ಸೆ: ಮಂಗಳೂರಿನ ಮನೋವೈದ್ಯರಾದ  ಡಾ.ಕಿರಣ್ ಕುಮಾರ್ ಅವರಲ್ಲಿಗೆ ಫೆ.28 ರಂದು ಎರಡನೇ ಬಾರಿಗೆ ಹೊಟೇಲ್ ಮಾಲೀಕ ಅಬ್ದುಲ್ ಲತೀಫ್ , ಅಬ್ದುಲ್ ಅಜೀಜ್ , ಮಹಮ್ಮದ್ ಅಕ್ರಮ್ ಕರೆದುಕೊಂಡು ಹೋಗಿ ಪರೀಕ್ಷಿಸಿ ಮೆಡಿಸಿನ್ ಗಳನ್ನು ಪಡೆದುಕೊಂಡು ಬಂದಿದ್ದಾರೆ.

- Advertisement -
spot_img

Latest News

error: Content is protected !!