Saturday, June 28, 2025
Homeಕರಾವಳಿಮಂಗಳೂರು ನಗರ ಉತ್ತರ ಮಂಡಲ ನೇತೃತ್ವದಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಜನ್ಮ ದಿನೋತ್ಸವ

ಮಂಗಳೂರು ನಗರ ಉತ್ತರ ಮಂಡಲ ನೇತೃತ್ವದಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಜನ್ಮ ದಿನೋತ್ಸವ

spot_img
- Advertisement -
- Advertisement -

ಮಂಗಳೂರು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ಮಂಡಲ ನೇತೃತ್ವದಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಜನ್ಮ ದಿನೋತ್ಸವದ ಪ್ರಯುಕ್ತ ಸಂಸ್ಮರಣಾ ಕಾರ್ಯಕ್ರಮ ವೀರ ಸಾರ್ವಕರ್ ವೇದಿಕೆ ಅಡ್ಯಾರ್ ಗಾರ್ಡನ್ ನಲ್ಲಿ ಜರಗಿತು.

ರಾಷ್ಟ್ರೀಯ ಸೇವಾಯೋಜನೆ 2020 + 21 ನೇ ಸಾಲಿನ ರಾಷ್ಟ್ರಮಟ್ಟದ ಅತ್ಯುತ್ತಮ ಸ್ವಯಂ ಸೇವಕಿ ಪ್ರಶಸ್ತಿ ಪುರಸ್ಕೃತರಾದ ರಶ್ಮಿ ಜೆ ಅಂಚನ್ ಅವರನ್ನು ಸನ್ಮಾನಿಸಲಾಯಿತು.ಪ್ರಕಾಶ್ ಮಲ್ಪೆ ಅವರು ಪಂಡಿತ್ ದೀನ್ ದಯಾಳ್ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು.

ಮಂಗಳೂರು ನಗರ ಉತ್ತರ ಮಂಡಲ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ, ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಪಕ್ಷದ ಪ್ರಮುಖರಾದ  ಕಸ್ತೂರಿ ಪಂಜ, ರಾಮ್ ದಾಸ್ ಬಂಟ್ವಾಳ, ಸುಧೀರ್ ಶೆಟ್ಟಿ ಕಣ್ಣೂರು, ಪೂಜಾ ಪೈ, ಸಂದೀಪ್ ಪಚ್ಚನಾಡಿ, ರಾಜೇಶ್ ಕೊಟ್ಟಾರಿ, ಅಜಿತ್ ಶೆಟ್ಟಿ, ಸಚಿನ್ ಹೆಗ್ಡೆ, ಗೋಕುಲ್ ದಾಸ್ ಶೆಟ್ಟಿ, ಮಹೇಶ್ ಮೂರ್ತಿ ಸುರತ್ಕಲ್, ಅಮರೇಶ್ ಬೇಕಲ್ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮ ದ ಬಳಿಕ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ  ಕ್ರಾಂತಿ ಸೂರ್ಯ ಭಗತ್ ಸಿಂಹ  ಯಕ್ಷಗಾನ  ಜರಗಿತು.

- Advertisement -
spot_img

Latest News

error: Content is protected !!