Friday, May 3, 2024
Homeಕರಾವಳಿಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆ ಬದಿಯೇ ಅಪಾಯಕಾರಿ ಪೈಪ್‌ಲೈನ್ ಕಾಮಗಾರಿ; ಸೂಕ್ತ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ  ದೂರು

ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆ ಬದಿಯೇ ಅಪಾಯಕಾರಿ ಪೈಪ್‌ಲೈನ್ ಕಾಮಗಾರಿ; ಸೂಕ್ತ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ  ದೂರು

spot_img
- Advertisement -
- Advertisement -

ಬೆಳ್ತಂಗಡಿ: ಉಪ್ಪಿನಂಗಡಿ ಗುರುವಾಯನಕೆರೆ ಲೋಕೋಪಯೋಗಿ ರಸ್ತೆಯ ಪಕ್ಕದಲ್ಲಿ ಸಂಬಂಧಿತ ಸಕ್ಷಮದಿಂದ ಅನುಮತಿ ರಹಿತವಾಗಿ ಅಪಾಯಕಾರಿ ಹೊಂಡ ತೋಡಿ ದೊಡ್ಡ ಗಾತ್ರದ ಪೈಪ್ ಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು ಇದರಿಂದ ಸಂಚಾರಕ್ಕೆ ಕಿರಿ ಕಿರಿ ಮತ್ತು ಅಪಘಾತವಾಗುವ ಭೀತಿ ಇದೆ. ಅಲ್ಲದೆ ಈ ಅಸಮರ್ಪಕ ಕಾಮಗಾರಿಯಿಂದ ಜನರ ತೆರಿಗೆ ಹಣ ದುರ್ವ್ಯಯವಾಗುತ್ತಿದೆ ಎಂದು ನಾಗರಿಕರ ಪರವಾಗಿ ಶೇಖರ್ ಲಾಯಿಲ ಅವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಲೋಕೋಪಯೋ ಇಲಾಖೆಗೆ ಸೇರಿದ ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆಯ ತೀರಾ ಪಕ್ಕದಲ್ಲಿ ಬೆಳ್ತಂಗಡಿ ಏತ ನೀರಾವರಿ ಯೋಜನೆಗೆ ಸಂಬಂಧಿಸಿದ ದೊಡ್ಡ ಗಾತ್ರದ ಪೈಪ್‌ಗಳನ್ನು ತೀರ ಅಪಾಯಕಾರಿ ರೀತಿಯಲ್ಲಿ ಅಳವಡಿಸಲಾಗುತ್ತಿದೆ. ಈ ಬಗ್ಗೆ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಕರ್ನಾಟಕ ನೀರಾವರಿ  ನಿಗಮ ನಿಯಮಿತದ ಅಧಿಕಾರಿಗಳು ಯಾವುದೇ ಪಾರ್ವಾನುಮತಿ ಇಲ್ಲದೆ, ಸೂಕ್ತ ಸುರಕ್ಷಾ ಕ್ರಮಗಳನ್ನೂ ಅಳವಡಿಸದೇ ಕಾಮಗಾರಿ ನಡೆಸುತ್ತಿರುವುದಾಗಿ ತಿಳಿಸಿರುತ್ತಾರೆ.


ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯಿಂದ ಸುಮಾರು 7 ಮೀಟರ್ ಅಂತರ ಬಿಟ್ಟು ಕಾಮಗಾರಿ ನಡೆಸಬೇಕೆಂಬ ನಿಯಮವಿದ್ದರೂ ಅದನ್ನು ದಿಕ್ಕರಿಸಿ ಆಕ್ರಮವಾಗಿ ಕಾಮಗಾರಿ ನಡೆಸುತ್ತಿದ್ದಾರೆ. ಇದರಿಂದಾಗಿ ಮುಂದೆ ರಸ್ತೆ ಅಗಲೀಕರಣ ನಡೆಸುವ ಸಂದರ್ಭದಲ್ಲಿ ಈ ಪೈಪ್ ಲೈನ್ ಅನ್ನು ಅಗೆಯಬೇಕಾದ ಪರಿಸ್ಥಿತಿ ಎದುರಾಗಬಹುದು. ಇದರಿಂದಾಗಿ ಸಾರ್ವಜನಿಕರು ಕಟ್ಟಿದ ತೆರಿಗೆ ಹಣದ ಸಂಪೂರ್ಣ ದುರ್ಬಳಕೆಯಾದಂತಾಗುತ್ತದೆ.
ಅಲ್ಲದೆ ರಸ್ತೆಯ ತೀರ ಹತ್ತಿರದಲ್ಲಿ ತೋಡಿರುವ ಈ ಹೊಂಡದಿಂದಾಗಿ ವಾಹನಗಳು ಹೊಂಡಕ್ಕೆ ಬಿಟ್ಟು ಅಪಘಾತಗಳಾಗುವ ಸಂಭವ ಕೂಡ ಇರುತ್ತದೆ. ಆದುದರಿಂದ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರದೇಶಿಸಿ ಅನುಮತಿ ರಹಿತವಾಗಿ ನಡೆಸುತ್ತಿರುವ ಈ ಕಾಮಗಾರಿಯನ್ನು ತಡೆಹಿಡಿಯಬೇಕು. ಲೋಕೋಪಯೋಗಿ ಇಲಾಖಾ ನಿಯಮ ಅನುಸರಿಸಿ ಸುರಕ್ಷತೆ ಕಾಪಾಡಿಕೊಂಡು ಕಾಮಗಾರಿ ಮುಂದುವರಿಸುವಂತೆ  ನಿರ್ದೇಶಿಸಬೇಕು. ಇಲ್ಲದಿದ್ದಲ್ಲಿ ಮುಂದಕ್ಕೆ ಕಾನೂನು ರೀತಿಯ ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಆ ವೇಳೆ ಈ ಲಿಖಿತ ದೂರನ್ನು  ಸಿವಿಲ್ ಪ್ರಕ್ರೀಯೆ ಸಂಹಿತೆಯ ಕಲಂ 80 ರ ಅಡಿಯಲ್ಲಿ ನೋಟೀಸೆಂದು ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ.
ದೂರಿ‌ನ ಪ್ರತಿಯನ್ನು ಲೋಕೋಪಯೋಗಿ ಇಲಾಖೆಯ ಬೆಳ್ತಂಗಡಿ ಕಚೇರಿ, ಮಂಗಳೂರು ವಿಭಾಗೀಯ ಕಚೇರಿ, ಕರ್ನಾಟಕ ನೀರಾವರಿ ನಿಗಮ ಉಡುಪಿ ಸಿದ್ದಾಪುರ ಕಚೇರಿ, ಸಹಾಯಕ ಆಯುಕ್ತರು (ಎ.ಸಿ) ಪುತ್ತೂರು  ಹಾಗೂ ತಹಶಿಲ್ದಾರರ ಅವಗಾಹನೆಗೂ ತರಲಾಗಿದೆ. ಒಟ್ಟಿನಲ್ಲಿ ಈ ಮನವಿಗೆ ಜಿಲ್ಲಾಧಿಕಾರಿಗಳು ಯಾವ ರೀತಿ ಕ್ರಮಕ್ಕೆ ಮುಂದಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

- Advertisement -
spot_img

Latest News

error: Content is protected !!