Saturday, May 4, 2024
Homeಕರಾವಳಿಉಡುಪಿಉಡುಪಿ: ನವಜೀವನ ಸಮಿತಿ ಸದಸ್ಯರಿಗೆ ಹೈನುಗಾರಿಕೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ

ಉಡುಪಿ: ನವಜೀವನ ಸಮಿತಿ ಸದಸ್ಯರಿಗೆ ಹೈನುಗಾರಿಕೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ

spot_img
- Advertisement -
- Advertisement -

ಉಡುಪಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ರಿ ,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ( ರಿ . ) ಉಡುಪಿ ಪ್ರಾದೇಶಿಕ ವಿಭಾಗ , ರಾಷ್ಟ್ರೀಯ ಸ್ವಸಹಾಯ ಸಂಘಗಳ ತರಬೇತಿ ಸಂಸ್ಥೆ , ಉಡುಪಿ ಇದರ ಸಹಯೋಗದೊಂದಿಗೆ ನವಜೀವನ ಸಮಿತಿ ಸದಸ್ಯರಿಗೆ 3 ದಿನಗಳ ಹೈನುಗಾರಿಕೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ನಡೆಯಿತು.

39 ನವಜೀವನ ಸದಸ್ಯರು ಪ್ರಾದೇಶಿಕ ವಿಭಾಗ ದ್ಯಂತ ಆಗಮಿಸಿ ತರಬೇತಿ ಪಡೆದರು .ಇವರಿಗೆ ನವಜೀವನ ಬ್ಯಾಡ್ಜ್ , ಭಾಗವಹಿಸುವಿಕೆಯ ಪ್ರಮಾಣಪತ್ರ , ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರು ಬರೆದ ಹೈನುಗಾರಿಕೆ ಕುರಿತಾದ ಮಾಹಿತಿ ಪುಸ್ತಕ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ಪಾಯಸ್ , ವೇದಿಕೆಯ ನಿಕಟಪೂರ್ವ ರಾಜ್ಯ ಅಧ್ಯಕ್ಷರಾದ ದೇವದಾಸ್ ಹೆಬ್ಬಾರ್ , ಜಿಲ್ಲಾಧ್ಯಕ್ಷ ರಾದ ನವೀನ್ ಅಮೀನ್ , ನಿರ್ದೇಶಕರಾದ ಗಣೇಶ್ , ಯೋಜನಾಧಿಕಾರಿ ಜೈವಂತ ಪಟಗಾರ್ , ಪ್ರಾಂಶುಪಾಲರಾದ ಉಲ್ಲಾಸ ಮೇಸ್ತ , ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಉಪಸ್ಥಿತರಿದ್ದರು .

- Advertisement -
spot_img

Latest News

error: Content is protected !!