Saturday, May 18, 2024
Homeಕರಾವಳಿಉಡುಪಿಕೃಷ್ಣನಗರಿಯಲ್ಲಿ ಅಬ್ಬರಿಸಿದ ಕಿರಾತಕ ಕೊರೋನಾ: ಉಡುಪಿಯಲ್ಲಿ 73 ಮತ್ತು ದ.ಕ 4 ಮಂದಿಗೆ ಸೋಂಕು ದೃಢ

ಕೃಷ್ಣನಗರಿಯಲ್ಲಿ ಅಬ್ಬರಿಸಿದ ಕಿರಾತಕ ಕೊರೋನಾ: ಉಡುಪಿಯಲ್ಲಿ 73 ಮತ್ತು ದ.ಕ 4 ಮಂದಿಗೆ ಸೋಂಕು ದೃಢ

spot_img
- Advertisement -
- Advertisement -

ಉಡುಪಿ:ಕಿಲ್ಲರ್ ಕೊರೋನಾ ಕರಾವಳಿ ಜನತೆಯನ್ನು ಬೆಂಬಿಡದ ಭೂತದಂತೆ ಕಾಡುತ್ತಿದೆ. ಉಡುಪಿಯಲ್ಲಿಂದು ಒಂದೇ ದಿನ ಬರೋಬ್ಬರಿ 73 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ. ಇನ್ನು ದಕ್ಷಿಣ ಕನ್ನಡದಲ್ಲಿ 4 ಮಂದಿಯ ದೇಹಕ್ಕೆ ಮಹಾಮಾರಿ ಕೊರೋನಾ ವಕ್ಕರಿಸಿದೆ.

ಉಡುಪಿ ಜಿಲ್ಲೆಯ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ260ಕ್ಕೆ ಏರಿಕೆಯಾಗಿದೆ. ಜಿಲ್ಲೆಯ 73 ಪ್ರಕರಣಗಳ ಪೈಕಿ 38 ಪ್ರಕರಣಗಳು ಸಂಪರ್ಕ ಪತ್ತೆಯಾಗಿಲ್ಲ. ಇವರು ಅನ್ಯರಾಜ್ಯದಿಂದ ಬಂದವರಲ್ಲ. ಇವರಿಗೆ ಹೇಗೆ ಕೋವಿಡ್-19 ಸೋಂಕು ತಾಗಿದೆ ಎನ್ನುವ ಮೂಲವೇ ಪತ್ತೆಯಾಗದಿರುವುದು ಜಿಲ್ಲಾಡಳಿತದ ತಲೆಬಿಸಿಗೆ ಕಾರಣವಾಗಿದೆ.

ರಾಜ್ಯದಲ್ಲಿಯೂ ಕೊರೊನಾ ಆರ್ಭಟ ಜೋರಾಗಿದ್ದು, 187 ಪ್ರಕರಣ ದಾಖಲಾಗಿದೆ. ಈ ಮೂಲಕ ಕೊರೊನಾ ಪೀಡಿತರ ಸಂಖ್ಯೆ 3,408ಕ್ಕೆ ಏರಿಕೆಯಾಗಿದೆ.

- Advertisement -
spot_img

Latest News

error: Content is protected !!