Thursday, May 9, 2024
Homeಅಪರಾಧವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣ; ಸಂತೋಷ್ ನ್ಯಾಯಾಲಯಕ್ಕೆ ಹಾಜರಾಗಲು ನೋಟಿಸ್; ಸಿಬಿಐ ಸಲ್ಲಿಸಿದ್ದ ಮರುತನಿಖೆ ಆದೇಶಕ್ಕೆ...

ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣ; ಸಂತೋಷ್ ನ್ಯಾಯಾಲಯಕ್ಕೆ ಹಾಜರಾಗಲು ನೋಟಿಸ್; ಸಿಬಿಐ ಸಲ್ಲಿಸಿದ್ದ ಮರುತನಿಖೆ ಆದೇಶಕ್ಕೆ ಕ್ಷಣಗಣನೆ

spot_img
- Advertisement -
- Advertisement -

ಬೆಳ್ತಂಗಡಿ : 12 ವರ್ಷದ ಹಿಂದೆ ಕಾಲೇಜ್ ವಿದ್ಯಾರ್ಥಿನಿ ಕು. ಸೌಜನ್ಯ(17) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿಯಾಗಿದ್ದ ಸಂತೋಷ್ ರಾವ್ ಮೇಲಿನ ಸಾಕ್ಷಧಾರದ ಕೊರತೆಯಿಂದ 16-6-2023 ರಂದು ದೋಷಮುಕ್ತಗೊಳಿಸಿ ಆದೇಶ ನೀಡಲಾಗಿತ್ತು‌.

ಈ ಕೆಳ ನ್ಯಾಯಾಲಯ ಸಂತೋಷ್ ರಾವ್ ವಿರುದ್ದ ದೋಷಮುಕ್ತಗೊಳಿಸಿದ ಆದೇಶದ ವಿರುದ್ಧ ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್ ಸಲ್ಲಿಸಿದ್ದ ಅಪೀಲು ಜ. 31 ರಂದು(ಬುಧವಾರ) ಬೆಂಗಳೂರು ಹೈಕೋರ್ಟ್ ನ ನ್ಯಾಯಾಧೀಶರಾದ ಶ್ರೀನಿವಾಸ ಹರೀಶ್ ಕುಮಾರ್ ಮತ್ತು ವಿಜಯ ಕುಮಾರ್ ಎ ಪಾಟೀಲ್ ಅವರಿದ್ದ ವಿಭಾಗಿಯ ಪೀಠ ಸೌಜನ್ಯ ಕೊಲೆ ಪ್ರಕರಣದ ಸಿಬಿಐ ಸಲ್ಲಿಸಿದ ಮರುತನಿಖೆಯ ಮೇಲ್ಮನವಿ ವಿಭಾಗಿಯ ಪೀಠದ ಎದುರು ತನಿಖೆಗೆ ಬಂದಿರುತ್ತದೆ. ಇದೀಗ ವಿಭಾಗಿಯ ನ್ಯಾಯಪೀಠವು ಸಂತೋಷ್ ರಾವ್ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಲು ಆದೇಶ ಮಾಡಿದೆ.

- Advertisement -
spot_img

Latest News

error: Content is protected !!