Thursday, June 26, 2025
Homeಕರಾವಳಿಮಂಗಳೂರು: ಪ್ರಯಾಣಿಕರಿಗೆ ತಿಗಣೆ ಕಾಟಕ್ಕೆ ಬಸ್ ಕಂಪನಿಗೆ ದಂಡ ವಿಧಿಸಿದ ಕೋರ್ಟ್!

ಮಂಗಳೂರು: ಪ್ರಯಾಣಿಕರಿಗೆ ತಿಗಣೆ ಕಾಟಕ್ಕೆ ಬಸ್ ಕಂಪನಿಗೆ ದಂಡ ವಿಧಿಸಿದ ಕೋರ್ಟ್!

spot_img
- Advertisement -
- Advertisement -

ಮಂಗಳೂರು: ಬಸ್ ನಲ್ಲಿ ತಿಗಣೆ ಕಾಟದ ಕಾರಣಕ್ಕೆ ಖಾಸಗಿ ಬಸ್ ಕಂಪನಿ ಹಾಗೂ ರೆಡ್ ಬಸ್ ಕಂಪನಿಗೆ ನ್ಯಾಯಾಲಯ ದಂಡ ವಿಧಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯದಿಂದ ಆದೇಶ ನೀಡಲ್ಪಟ್ಟಿದ್ದು,‌ ಸೀ ಬರ್ಡ್ ಬಸ್ ಕಂಪನಿಗೆ ದಂಡ ವಿಧಿಸಲಾಗಿದೆ.

ದೀಪಿಕಾ ಸುವರ್ಣ ಎಂಬ ಪ್ರಯಾಣಿಕರು ದಾಖಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಗ್ರಾಹಕ ನ್ಯಾಯಾಲಯ ಈ ತೀರ್ಪು ನೀಡಿದೆ.

ದೀಪಿಕಾ‌ ಸುವರ್ಣ ಮಂಗಳೂರಿನಿಂದ ಬೆಂಗಳೂರಿಗೆ ರೆಡ್ ಬಸ್ ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸಿ ಸೀ ಬರ್ಡ್ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದರು, ಈ ವೇಳೆ ಬಸ್ ನಲ್ಲಿ ತಿಗಣೆ ಕಾಟ ಎದುರಿಸಿದ್ದ ದೀಪಿಕಾ ಸುವರ್ಣ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಬೆಂಗಳೂರಿಗೆ ಕಿರುತೆರೆ ರಿಯಾಲಿಟಿ ಶೋ ದಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಬಸ್ ನಲ್ಲಿ ತಿಗಣೆ ಕಚ್ಚಿದ್ದು, ಇದರಿಂದ ರಿಯಾಲಿಟಿ ಶೋಗಾಗಿ ತಯಾರಿ ಮಾಡಲು ಆಗದೇ ಸಂಭಾವನೆಗೂ ಸಮಸ್ಯೆ ಉಂಟಾಗಿತ್ತು ಎಂದು ದೀಪಿಕಾ ಸುವರ್ಣ ಸೀಬರ್ಡ್ ಬಸ್ ಮತ್ತು ರೆಡ್ ಬಸ್ ಆ್ಯಪ್ ವಿರುದ್ಧ ದೂರು ದಾಖಲಿಸಿದ್ದರು.

ಗ್ರಾಹಕರ ನ್ಯಾಯಾಲಯ ಒಂದು ಲಕ್ಷ ರೂಪಾಯಿ ಪರಿಹಾರ, 18,650 ರೂಪಾಯಿ ದಂಡ, 850 ರೂಪಾಯಿ ಟಿಕೆಟ್ ದರ ಹಾಗೂ ಕಾನೂನು ಸಮರದ 10 ಸಾವಿರ ನೀಡುವಂತೆ ಬಸ್ ಕಂಪನಿಗೆ ಆದೇಶ ನೀಡಿದೆ.

- Advertisement -
spot_img

Latest News

error: Content is protected !!