Friday, May 17, 2024
Homeಕರಾವಳಿಬಂಟ್ವಾಳ : ಸಿಎಂ ಸಿದ್ದರಾಮಯ್ಯರ ಫೋಟೋವನ್ನು ಅವಹೇಳನಕಾರಿಯಾಗಿ ಎಡಿಟ್ ಮಾಡಿ ವಾಟ್ಸಾಪ್ ನಲ್ಲಿ ಹರಿ ಬಿಟ್ಟ...

ಬಂಟ್ವಾಳ : ಸಿಎಂ ಸಿದ್ದರಾಮಯ್ಯರ ಫೋಟೋವನ್ನು ಅವಹೇಳನಕಾರಿಯಾಗಿ ಎಡಿಟ್ ಮಾಡಿ ವಾಟ್ಸಾಪ್ ನಲ್ಲಿ ಹರಿ ಬಿಟ್ಟ ಯುವಕ; ದೂರು ದಾಖಲು

spot_img
- Advertisement -
- Advertisement -

ಬಂಟ್ವಾಳ :ಸಿಎಂ ಸಿದ್ದರಾಮಯ್ಯರ ಫೋಟೋವನ್ನು ಅವಹೇಳನಕಾರಿಯಾಗಿ ಎಡಿಟ್ ಮಾಡಿ ವಾಟ್ಸಾಪ್ ನಲ್ಲಿ ಹರಿ ಬಿಟ್ಟ ಯುವಕನ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ನಂದಾವರ ಅವರು ದೂರು ನೀಡಿದ್ದು, ಸಿದ್ದರಾಮಯ್ಯ ಅವರನ್ನು ಹಸಿರು ಕೋಟು ಹಾಗೂ ತಲೆಗೆ ಟೋಪಿ ಧರಿಸಿ ಹಂದಿಯ ಮೇಲೆ ಕುಳಿತಿರುವಂತೆ ಚಿತ್ರೀಕರಿಸಿ “ಮಸೀದಿ ಕಡೆ ಸಿದ್ದು ಸವಾರಿ” ಎಂಬ ತಲೆ ಬರಹವಿರುವ ಫೋಟೋವನ್ನು ಜೈ ಕರ್ನಾಟಕ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಸೋಮನಗೌಡ ಎಂಬಾತ ಹರಿಯಬಿಟ್ಟಿದ್ದು, ಇದು ಮುಖ್ಯಮಂತ್ರಿ ಅವರ ಘನತೆಗೆ ಧಕ್ಕೆ ಉಂಟು ಮಾಡುವುದಲ್ಲದೆ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತದೆ.

ಆದ್ದರಿಂದ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.

ದೂರು ಸ್ವೀಕರಿಸಿದ ಬಂಟ್ವಾಳ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಅವರು ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿರಾಜ್ ಮದಕ, ಸಮದ್ ಕೈಕಂಬ, ಶಫೀಕ್ ಗೂಡಿನ ಬಳಿ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದಾರೆ.

- Advertisement -
spot_img

Latest News

error: Content is protected !!