Monday, April 29, 2024
Homeಕರಾವಳಿಮುಖ್ಯಮಂತ್ರಿಗಳಿಂದ ಕಡಬ ತಾ.ಪಂ.ಕಟ್ಟಡದ ಉದ್ಘಾಟನೆ; ಮೀನುಗಾರಿಕಾ ಸಚಿವ ಎಸ್ ಅಂಗಾರ ಹೇಳಿಕೆ

ಮುಖ್ಯಮಂತ್ರಿಗಳಿಂದ ಕಡಬ ತಾ.ಪಂ.ಕಟ್ಟಡದ ಉದ್ಘಾಟನೆ; ಮೀನುಗಾರಿಕಾ ಸಚಿವ ಎಸ್ ಅಂಗಾರ ಹೇಳಿಕೆ

spot_img
- Advertisement -
- Advertisement -

ಕಡಬ:  ನೂತನವಾಗಿ 4.50 ಕೋಟಿ ರೂ. ವೆಚ್ಚದಲ್ಲಿ ಕಡಬದ ಹಳೆಸ್ಟೇಶನ್ ಬಳಿ ನಿರ್ಮಾಣಗೊಂಡಿರುವ ಕಡಬ ತಾ.ಪಂ.ನ ಸುಸಜ್ಜಿತ ಕಟ್ಟಡವನ್ನು ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ಉದ್ಘಾಟಿಸಲು ತೀರ್ಮಾನಿಸಲಾಗಿದೆ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌.ಅಂಗಾರ ಹೇಳಿದ್ದಾರೆ.

ಕಟ್ಟಡದ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು ನೂತನ ಕಟ್ಟಡ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿ ಕಡಬದಲ್ಲಿ ಬೃಹತ್ ಕಾರ್ಯಕ್ರಮ ಏರ್ಪಡಿಸಿ ಕಟ್ಟಡವನ್ನು ಅವರಿಂದಲೇ ಮಾಡಿಸಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಪುತ್ತೂರು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಭರತ್ ಬಿ.ಎಂ. ಅವರು ಮಾಹಿತಿ ನೀಡಿ ಕಚೇರಿ ಕೊಠಡಿಗಳು, ಸಭಾಂಗಣ ಸೇರಿದಂತೆ ಆಕರ್ಷಕ ವಿನ್ಯಾಸದ ಸುಸಜ್ಜಿತ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ. ಪೀಠೋಪಕರಣಗಳ ಕೆಲಸ ಅಂತಿಮ ಹಂತದಲ್ಲಿದೆ. ಮಳೆ ಕಡಿಮೆಯಾದಕೂಡಲೇ ಕಟ್ಟಡದ ಹೊರಾಂಗಣಕ್ಕೆ ಇಂಟರ್ಲಾಕ್ ಅಳವಡಿಕೆ, ಪಾರ್ಕಿಂಗ್ ಜಾಗ ಸಮತಟ್ಟು, ಸಂಪರ್ಕ ರಸ್ತೆಯ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು ಎಂದರು.

- Advertisement -
spot_img

Latest News

error: Content is protected !!