Friday, June 27, 2025
Homeಕರಾವಳಿಬಂಟ್ಸ್ ಸಮುದಾಯದವರ ಪರೋಪಕಾರದ ಗುಣಧರ್ಮ ಅನುಕರಣೀಯ: ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

ಬಂಟ್ಸ್ ಸಮುದಾಯದವರ ಪರೋಪಕಾರದ ಗುಣಧರ್ಮ ಅನುಕರಣೀಯ: ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

spot_img
- Advertisement -
- Advertisement -

ಬೆಂಗಳೂರು: ಬಂಟ್ಸ್ ಸಮುದಾಯದವರ ದಾನ ಹಾಗೂ ಪರೋಪಕಾರದ ಗುಣಧರ್ಮ ಅನುಕರಣೀಯವಾದುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನ‌ ತಾವರೆಕೆರೆ ಹೋಬಳಿಯ ಯಲಚಗುಪ್ಪೆಯಲ್ಲಿರುವ ಬಂಟರ ಸಂಘ-ಆರ್ ಎನ್ ಎಸ್ ವಿದ್ಯಾನಿಕೇತನ 11 ಶೈಕ್ಷಣಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ‌ ಸಿಎಂ, ಬಂಟ್ಸ್ ಸಮುದಾಯದವರು ದೇಶ ವಿದೇಶಗಳಲ್ಲಿ ನೆಲೆಸಿದ್ದರೂ, ತಮ್ಮ ತಾಯ್ನಾಡಿನ ಮೇಲಿನ ಪ್ರೀತಿಯನ್ನು ಮರೆಯುವುದಿಲ್ಲ‌ ಎಂದು ಹೇಳಿದ್ದಾರೆ.

ಬಂಟ್ಸ್ ಸಮುದಾಯದವರು ತಾವು ನೆಲೆಸಿರುವ ಊರನ್ನು ಅಭಿವೃದ್ಧಿಗೊಳಿಸಿ, ಅಲ್ಲಿ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ. ತಮ್ಮ ಕಾಯಕವನ್ನು ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ಮಾಡುವ ಜೊತೆಗೆ ತಾವು ನೆಲೆಸಿರುವ ಸಮಾಜದಲ್ಲಿ ಸಾಮರಸ್ಯ ಹಾಗೂ ವಿಶ್ವಾಸದೊಂದಿಗೆ ಬದುಕುತ್ತಾರೆ. ಸಮುದಾಯದವರ ಒಗ್ಗಟ್ಟು, ಸಂಘಟನಾ ಶಕ್ತಿ, ದಾನಿಗಳ, ಪರೋಪಕಾರದ ಗುಣಧರ್ಮ ಅನುಕರಣೀಯವಾದುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಬಂಟ್ಸ್ ಸಂಘದ ಜೊತೆಗೆ ನನಗೆ ನಿಕಟವಾದ ಸಂಪರ್ಕವಿದೆ. ಆರ್ ಎನ್ ಎಸ್ ವಿದ್ಯಾನಿಕೇತನ 11 ಶಾಲಾಕಟ್ಟಡ ಅದ್ಭುತವಾಗಿ ನಿರ್ಮಿಸಲಾಗಿದೆ. ಇಲ್ಲಿಯ ಪರಿಸರ, ವಿನ್ಯಾಸ,ಸೌಕರ್ಯಗಳು ಗುಣಮಟ್ಟದ ಶಿಕ್ಷಣ ನೀಡಲು ಪೂರಕವಾಗಿದೆ. ಬಂಟ್ಸ್ ಸಂಘದ ವಿದ್ಯಾಸಂಸ್ಥೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ಈ ಪ್ರದೇಶದ ಸುತ್ತಮುತ್ತಲಿನ ಎಲ್ಲ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣದ ಅವಕಾಶವನ್ನು ಕಲ್ಪಿಸಲಾಗಿದೆ. ಈ ಶಾಲೆಯಲ್ಲಿ ವಿದ್ಯೆ ಪಡೆಯುವ ಎಲ್ಲ ಮಕ್ಕಳೂ ಸಮಾಜದ ವಿವಿಧ ರಂಗಗಳಲ್ಲಿ ಯಶಸ್ಸನ್ನು ಪಡೆಯಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾರೈಸಿದ್ದಾರೆ.

- Advertisement -
spot_img

Latest News

error: Content is protected !!