- Advertisement -
- Advertisement -
ಚಿಕ್ಕಮಗಳೂರು :ಗನ್ ತೆಗೆದಿಡುವಾಗ ಮಿಸ್ ಫೈರ್ ಆಗಿ ವ್ಯಕ್ತಿಯ ಬಲಗಣ್ಣಿನಿಂದ ಗುಂಡು ಹೊರಗೆ ಬಂದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಳವಾಸೆ ಗ್ರಾಮದಲ್ಲಿ ನಡೆದಿದೆ. ಕಳವಾಸೆ ಗ್ರಾಮದ ಅರುಣ್ (47) ಮೃತ ದುರ್ದೈವಿ.
ಅರುಣ್ ಶೆಡ್ ನಲ್ಲಿದ್ದ ಗನ್ ಒಳಗಿಡಲು ಒರೆಸುವಾಗ ಗುಂಡು ಸಿಡಿದಿದೆ. ಇನ್ನು ಇದು ಆತ್ಮಹತ್ಯೆಯೋ ಅಥವ ಮಿಸ್ ಫೈರ್ ಅನ್ನೋದು ಸ್ಪಷ್ಟವಾಗಿಲ್ಲ.ಪರೀಕ್ಷೆಗಾಗಿ ಮೃತದೇಹ ಹಾಸನದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಮನೆಯಲ್ಲಿ ಯಾರೂ ಇಲ್ಲದಿರುವಾಗ ಶೆಡ್ ನಲ್ಲಿ ಘಟನೆ ನಡೆದಿದೆ.ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -