- Advertisement -
- Advertisement -
ಚಿಕ್ಕಮಗಳೂರು : ಲಂಚ ಸ್ವೀಕರಿಸುವಾಗ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಚಿಕ್ಕಮಗಳೂರು ನಗರಸಭೆಯಲ್ಲಿ ನಡೆದಿದೆ. ನಗರಸಭೆ ಬಿಲ್ ಕಲೆಕ್ಟರ್ ಪ್ರದೀಪ್ ಬಂಧಿತ ಆರೋಪಿ.
ಇ-ಸ್ವತ್ತು ಮಾಡಿಕೊಡಲು ಏಳು ಸಾವಿರ ಲಂಚಕ್ಕೆ ಪ್ರದೀಪ್ ಬೇಡಿಕೆ ಇಟ್ಟಿದ್ದ.3000 ಮುಂಗಡ ಹಣ ಫೋನ್ ಪೇಯಲ್ಲಿ ಹಾಕಿಸಿಕೊಂಡಿದ್ದ.ಇಂದು 2000 ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.ರಾಕೇಶ್ ಎಂಬುವವರಿಂದ ಇ-ಸ್ವತ್ತು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರದೀಪ್. ಲೋಕಾಯುಕ್ತ ಅಧಿಕಾರಿ ಅನಿಲ್ ನಾಯಕ್ ನೇತೃತ್ವದಲ್ಲಿ ದಾಳಿ ನಡೆದಿದೆ.
- Advertisement -