- Advertisement -
- Advertisement -
ಚಿಕ್ಕಮಗಳೂರು: ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟ್ ನಲ್ಲಿ ಸಂಜೆ 7 ರಿಂದ ಬೆಳಗ್ಗೆ 7 ರ ತನಕ ಯಾವುದೇ ವಾಹನಗಳು ಸಂಚರಿಸದಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ ಆದೇಶಿಸಿರುತ್ತಾರೆ.
ಈ ಬಾರಿಯೂ ಮಳೆ ಜೋರಾಗಿರುವುದರಿಂದ ಅಲ್ಲಲ್ಲಿ ಮಣ್ಣು ಕುಸಿಯುವ ಸಾಧ್ಯತೆಯಿದ್ದು, ಮಂಜು ಕವಿದ ವಾತಾವರಣವಿದ್ದು, ರಸ್ತೆಗಳ ತಡೆಗೋಡೆ ತಾತ್ಕಾಲಿಕ ನಿರ್ಮಾಣಗೊಂಡಿದ್ದು ರಾತ್ರಿಯ ವೇಳೆ ಸಂಚರಿಸಲು ಸೂಕ್ತವಾಗಿರುವುದಿಲ್ಲ.
ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಪ್ರಸ್ತಾವನೆಯಂತೆ ಪರಿಶೀಲನೆ ಮಾಡಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ,ಗೌತಮ್ ಬಗಾದಿಯವರು ಇಂದಿನಿಂದ ಮುಂದಿನ ಆದೇಶ ಬರುವವರೆಗೆ ಯಾವುದೇ ವಾಹನಗಳು ಸಂಜೆ7ರಿಂದ ಬೆಳ್ಳಗೆ7ರವರೆಗೆ ಚಾರ್ಮಾಡಿ ಘಾಟ್ ನಲ್ಲಿ ಸಂಚರಿಸಲು ನಿರ್ಬಂಧಿಸಿ ಆದೇಶಿಸಿರುತ್ತಾರೆ.
- Advertisement -