Thursday, May 9, 2024
Homeಅಪರಾಧನಡೆದುಕೊಂಡು ಹೋಗುತ್ತಿರುವಾಗ ಶಿಕ್ಷಕಿಯ ಕರಿಮಣಿ ಎಗರಿಸಿದ ಕಳ್ಳ : ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

ನಡೆದುಕೊಂಡು ಹೋಗುತ್ತಿರುವಾಗ ಶಿಕ್ಷಕಿಯ ಕರಿಮಣಿ ಎಗರಿಸಿದ ಕಳ್ಳ : ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

spot_img
- Advertisement -
- Advertisement -

ಮಂಗಳೂರು: ನಡೆದುಕೊಂಡು ಹೋಗುತ್ತಿದ್ದಾಗ ಶಿಕ್ಷಕಿಯೊಬ್ಬರ ಕುತ್ತಿಗೆಯಿಂದ ಕರಿಮಣಿ ಸರ ಕಳ್ಳತನ ಮಾಡಿದ ಘಟನೆ ಸುರತ್ಕಲ್ ನಲ್ಲಿ ನಡೆದಿದೆ. ಇನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಚಿಕ್ಕಮಗಳೂರು ಜಿಲ್ಲೆ ಶಾಂತಿಪುರ ಕೊಪ್ಪದ ದುರ್ಗಬೆಟ್ಟು ನಿವಾಸಿ ಕೆ ಎಸ್ ಶ್ರೇಯಸ್ (24) ಎಂದು ಗುರುತಿಸಲಾಗಿದೆ.

ಸುರತ್ಕಲ್ ನ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ವಿದ್ಯಾ ಇವರು ತಮ್ಮ ಮನೆಯಿಂದ ಶಾಲೆ ಕಡೆಗೆ ಮದ್ಯಾಹ್ನ ನಡೆದುಕೊಂಡು ಹೋಗುತ್ತಿರುವಾಗ ಶಾಲೆಯ ಬಳಿಯ ಅಂಡರ್ ಪಾಸ್ ಬಳಿ ಯುವಕನೋರ್ವ ಕುತ್ತಿಗೆಗೆ ಕೈ ಹಾಕಿ ಕರಿಮಣಿ ಸರ ಎಗರಿಸಿದ್ದಾನೆ.

ಘಟನೆ ಬಗ್ಗೆ ವಿವರ ಪಡೆದ ಪೊಲೀಸರು ತಕ್ಷಣ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ 2 ಪವನ್ ನ ಕರಿಮಣಿ ಸರವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ 2019 ರಲ್ಲಿ ಸುರತ್ಕಲ್ ನ ಸ್ಥಳೀಯ ಕಾಲೇಜಿನಲ್ಲಿ ಬಿಸಿಎ ಅಭ್ಯಾಸ ಮಾಡಿದ್ದು ನಿರುದ್ಯೋಗಿಯಾಗಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

- Advertisement -
spot_img

Latest News

error: Content is protected !!