- Advertisement -
- Advertisement -
ಸುಬ್ರಹ್ಮಣ್ಯ: ತಾಲೂಕಿನಲ್ಲಿ ವರುಣ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದ್ದಾನೆ. ಅದರಲ್ಲೂ ಸುಬ್ರಮಣ್ಯದಲ್ಲಿ ಮಳೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆ ನೆರೆ ಸಂತ್ರಸ್ತರಿಗಾಗಿ ಇಲ್ಲಿನ ಅನಘ ವಸತಿಗೃಹದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಈ ಕಾಳಜಿ ಕೇಂದ್ರಕ್ಕೆ ಕಡಬ ತಹಶೀಲ್ದಾರ್ ಅನಂತ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುಳುಗಡೆ ಹೊಂದಿದ ಮನೆಯವರನ್ನು ಕಾಳಜಿ ಕೇಂದ್ರಕ್ಕೆ ಕರೆತರಲಾಗಿದೆ. ಇದೇ ವೇಳೆ ನಷ್ಟ ಪರಿಹಾರಕ್ಕೆ ಸರಕಾರದಿಂದ ಪರಿಹಾರದ ಚಕ್ ನೀಡಿದ್ದಾರೆ. ಬಾಕಿ ಉಳಿದವರಿಗೆ ಮುಂದಿನ ದಿನಗಳಲ್ಲಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸುಬ್ರಹ್ಮಣ್ಯ ಗ್ರಾಮಪಂಚಾಯಿತಿ ಸದಸ್ಯರಾದ ಹರೀಶ ಇಂಜಾಡಿ ಉಪಸ್ಥಿತರಿದ್ದರು.
- Advertisement -