Saturday, June 28, 2025
Homeಕರಾವಳಿಮಂಗಳೂರು: ಗುರುಪುರ ಸೇತುವೆ ಬಳಿ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ !

ಮಂಗಳೂರು: ಗುರುಪುರ ಸೇತುವೆ ಬಳಿ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ !

spot_img
- Advertisement -
- Advertisement -

ಗುರುಪುರ ಸೇತುವೆಯ ಮೇಲೆ ಮೋಟಾರ್ ಬೈಕ್ ನಿಲ್ಲಿಸಿ ನದಿಗೆ ಹಾರಿದ ಯುವಕನ ಮೃತದೇಹವು ಗುರುಪುರ ಸಮೀಪದ ಬೈಲುಪೇಟೆಯಲ್ಲಿ ಪತ್ತೆಯಾಗಿದೆ.

ಮೃತರನ್ನು ವಾಮಂಜೂರು ನಿವಾಸಿ ಯೋಗೀಶ್ ಅಲಿಯಾಸ್ ಮುನ್ನಾ (31) ಎಂದು ಗುರುತಿಸಲಾಗಿದೆ.

ಡಿಸೆಂಬರ್ 8ರ ಬುಧವಾರ ಸಂಜೆಯಿಂದ ಯೋಗೀಶ್ ನಾಪತ್ತೆಯಾಗಿದ್ದು, ಗುರುಪುರ ಸೇತುವೆಯಲ್ಲಿ ಆತನ ಬೈಕ್ ಮತ್ತು ಪಾದರಕ್ಷೆ ಪತ್ತೆಯಾಗಿದೆ. ಈ ಸುಳಿವು ಆಧರಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಬಜ್ಪೆ ಪೊಲೀಸರು ಸ್ಥಳೀಯರ ನೆರವಿನಿಂದ ಮೃತದೇಹಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ. ಆದರೆ, ಗುರುವಾರ ಅವರ ಮೃತದೇಹ ಪತ್ತೆಯಾಗಿಲ್ಲ. ಆದರೆ ಬೈಲುಪೇಟೆಯ ಮಸೀದಿ ಬಳಿ ತೇಲುತ್ತಿರುವುದು ಪತ್ತೆಯಾಗಿದೆ.

ಅವಿವಾಹಿತರಾಗಿದ್ದ ಯೋಗೀಶ್ ವೃತ್ತಿಯಲ್ಲಿ ಚಾಲಕರಾಗಿದ್ದರು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

- Advertisement -
spot_img

Latest News

error: Content is protected !!