Sunday, May 5, 2024
Homeಕರಾವಳಿಮಂಗಳೂರು ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆ, ರಕ್ತದಾನ ಶಿಬಿರ

ಮಂಗಳೂರು ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆ, ರಕ್ತದಾನ ಶಿಬಿರ

spot_img
- Advertisement -
- Advertisement -

ಮಂಗಳೂರು: ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆ, ಕೊಡಿಯಾಲ್ ಬೈಲ್, ಮಂಗಳೂರು ಹಾಗೂ ಸಮುದಾಯ ಆರೋಗ್ಯ ವಿಭಾಗ ಯೆನೆಪೋಯ ವೈದ್ಯಕೀಯ ಕಾಲೇಜು ಜಂಟಿ ಸಹಯೋಗದೊಂದಿಗೆ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಮಂಗಳೂರು ಶಾಖೆ ಹಾಗೂ ಸ್ಥಳೀಯ ವಾರ್ಡ್ ಕಾರ್ಪೊರೇಟರ್‌ಗಳ ಆಶ್ರಯದಲ್ಲಿ ಬಂದರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಿತು .

ಮುಖ್ಯ ಅತಿಥಿಗಳಾಗಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ, ರೆಡ್ ಕ್ರಾಸ್ ಸಂಸ್ಥೆಯ ವೈದ್ಯಾಧಿಕಾರಿ ಡಾ.ಜೆ.ಎನ್ ಭಟ್, ಶ್ರೀಮತಿ ಝೀನತ್ ಸಂಶುದ್ದೀನ್ ಕಾರ್ಪೊರೇಟರ್ ವಾರ್ಡ್ ನಂ 44, MCC ಆರೋಗ್ಯ ಅಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷರು ಶ್ರೀ ಡಿ ಎಂ ಅಸ್ಲಂ , ಸಮುದಾಯ ವೈದ್ಯಕೀಯ ವಿಭಾಗ ಯೆನೆಪೊಯ ವೈದ್ಯಕೀಯ ಕಾಲೇಜು ಮುಖ್ಯಸ್ಥರಾದ ಡಾ.ಪೂನಂ ಆರ್ ನಾಯಕ್, ಎಂ.ಆರ್. ಪ್ರವೀಣ್ ಕುಮಾರ್, ಜಿಲ್ಲಾ ಕೋ-ಆರ್ಡಿನೇಟರ್, ರೆಡ್ ಕ್ರಾಸ್, ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ಭಾಸ್ಕರ್ ಅರಸ ಮತ್ತಿತರರು ಉಪಸ್ಥಿತರಿದ್ಧರು.

ರಕ್ತದಾನ ಶಿಬಿರದಲ್ಲಿ ತುಂಬಾ ಸಂಖ್ಯೆಯಲ್ಲಿ ದಾನಿಗಳು ರಕ್ತದಾನ ಮಾಡಿದರು. ಎಲ್ಲ ದಾನಿಗಳಿಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

- Advertisement -
spot_img

Latest News

error: Content is protected !!