Thursday, June 4, 2026
Homeಕರಾವಳಿಮಂಗಳೂರುಬಂಧನ ಭೀತಿಯ ಬೆನ್ನಲ್ಲೇ ಹರೀಶ್ ಪೂಂಜ ನಿವಾಸಕ್ಕೆ ವಕೀಲರು, ಬಿಜೆಪಿ ನಾಯಕರು ದೌಡು

ಬಂಧನ ಭೀತಿಯ ಬೆನ್ನಲ್ಲೇ ಹರೀಶ್ ಪೂಂಜ ನಿವಾಸಕ್ಕೆ ವಕೀಲರು, ಬಿಜೆಪಿ ನಾಯಕರು ದೌಡು

- Advertisement -
- Advertisement -

ಬೆಳ್ತಂಗಡಿ; ಬಂಧನ ಭೀತಿಯಲ್ಲಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನಿವಾಸದ ಸುತ್ತಮುತ್ತ ಪೊಲೀಸರು ಸುತ್ತುವರಿದಿದ್ದು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇನ್ನು ಹರೀಶ್ ಪೂಂಜ ನಿವಾಸಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆ ವಕೀಲರು ಕೂಡ ದೌಡಾಯಿಸಿದ್ದಾರೆ. ಅಲ್ಲದೇ ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಆಗಮಿಸಿದ್ದಾರೆ. ಇನ್ನು ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ ಎನ್ನಲಾಗಿದೆ.

ಹರೀಶ ಪೂಂಜ ಬಂಧನ ಸಾಧ್ಯತೆ ಇದೆ ಎಂದು ಸುದ್ದಿ ಹರಡುತ್ತಿದ್ದಂತೆ ಸಾಕಷ್ಟು ಬಿಜೆಪಿ ಕಾರ್ಯಕರ್ತರು ಅವರ ನಿವಾಸದ ಎದುರು ಜಮಾಯಿಸಿದ್ದು ಪೊಲೀಸರಿಗೆ ಅವರನ್ನು ಸಂಭಾಳಿಸೋದು ಹರಸಾಹಸವಾಗಿದೆ.

- Advertisement -

Latest News

error: Content is protected !!