Tuesday, September 26, 2023
Homeಕರಾವಳಿಸಂಪಾಜೆ: ಬೈಕ್-ಸ್ಕೂಟಿ ಡಿಕ್ಕಿ, ಸ್ಕೂಟಿ ಸವಾರ ಸಾವು

ಸಂಪಾಜೆ: ಬೈಕ್-ಸ್ಕೂಟಿ ಡಿಕ್ಕಿ, ಸ್ಕೂಟಿ ಸವಾರ ಸಾವು

- Advertisement -
- Advertisement -

ಸುಳ್ಯ: ತಾಲೂಕಿನ ಗಡಿಭಾಗವಾಗಿರುವ ಸಂಪಾಜೆಯ ಚೆಟ್ಟೆಕಲ್ಲು ಸಮೀಪ ಬೈಕ್ ಸ್ಕೂಟಿ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಸಾವನ್ನಪ್ಪಿ ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಸಾವನ್ನಪ್ಪಿದ ವ್ಯಕ್ತಿಯನ್ನು ಬಂಡಡ್ಕ ಕೊಯಿನಾಡು ನಿವಾಸಿ ವಿಷ್ಣುಪ್ರಸಾದ್(40) ಎಂಡು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಸಂಪಾಜೆ ನಿವಾಸಿ ಗೌತಮ್ ಎಂದು ಗುರುತಿಸಲಾಗಿದೆ.

ವಿಷ್ಣು ಪ್ರಸಾದ್ ಕಲ್ಲುಗುಂಡಿ ಪೇಟೆಯಿಂದ ಜಿನಸಿ ಸಾಮಾನುಗಳನ್ನು ತೆಗೆದುಕೊಂಡು ಮನೆಗೆ ವಾಪಸ್ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಗೌತಮ್ ಅವರ ಬೈಕ್ ಡಿಕ್ಕಿ ಹೊಡೆಯಿತು. ಈ ವೇಳೆ ಗಂಭೀರ ಗಾಯಗೊಂಡ ವಿಷ್ಣು ಪ್ರಸಾದ್ ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ಇನ್ನು ಗಂಭೀರ ಗಾಯಗೊಂಡಿರುವ ಗೌತಮ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -
spot_img

Latest News

error: Content is protected !!