- Advertisement -
- Advertisement -
ಚಿಕ್ಕಮಗಳೂರು; ನಿಯಂತ್ರಣ ತಪ್ಪಿ ಬೈಕ್ ಅಪಘಾತವಾಗಿ ಸವಾರ ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನ ಸರಸ್ವತಿ ಪುರದಲ್ಲಿ ನಡೆದಿದೆ. ಪ್ರವೀಣ್ ನಾಯ್ಕ್( 24) ಮೃತ ಬೈಕ್ ಸವಾರ. ಬೈಕ್ ನಲ್ಲಿದ್ದ ಸಹ ಸವಾರ ಸಂತೋಷ್ ಗೆ ಗಂಭೀರ ಗಾಯಗಳಾಗಿವೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅತೀ ವೇಗವಾಗಿ ಬೈಕ್ ಚಲಾಯಿಸಿದ ಪರಿಣಾಮ ಸವಾರನ ನಿಯಂತ್ರಣ ತಪ್ಪಿ ಬೈಕ್ ಅಪಘಾತವಾಗಿದೆ. ರಸ್ತೆಯ ಪಕ್ಕದಲ್ಲಿರೋ ಚರಂಡಿಗೆ ಬೈಕ್ ಬಿದ್ದಿದೆ. ಪರಿಣಾಮ ಪ್ರವೀಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳು ಸಂತೋಷ್ ರನ್ನು ಸ್ಥಳೀಯರು ಕಡೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.
- Advertisement -