- Advertisement -
- Advertisement -
ಕೊಚ್ಚಿ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಉಂಟಾಗಿದ್ದು, ಕಳೆದ ಬಾರಿ ಗಳಿಸಿದ್ದ ಒಂದು ಸ್ಥಾನವನ್ನು ಕೂಡ ಕಳೆದುಕೊಂಡಿದೆ.
ಮಂಜೇಶ್ವರ ಮತ್ತು ಕೋನಿಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಸೋಲು ಕಂಡಿದ್ದು, ಹಾಗೆಯೆ ನೇಮಂನಲ್ಲಿ ಕುಮ್ಮನಂ ರಾಜಶೇಖರನ್ನು ಸೋಲನುಭವಿಸುವ ಮೂಲಕ ಕೇಸರಿ ಪಕ್ಷಕ್ಕೆ ಭಾರೀ ಆಘಾತವುಂಟಾಗಿದೆ.
ಪಾಲಕ್ಕಾಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಬಹುನಿರೀಕ್ಷಿತ ಅಭ್ಯರ್ಥಿ ಮೆಟ್ರೋ ಮ್ಯಾನ್ ಎಂದೇ ಖ್ಯಾತಿಯಾಗಿರುವ ಇ ಶ್ರೀಧರನ್ ಅವರಿಗೆ ಸೋಲುಂಟಾಗಿದೆ. ಅವರು ಯುಡಿಎಫ್ ಒಕ್ಕೂಟದ ಕಾಂಗ್ರೆಸ್ನ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಶರೀಪ್ ಪರಾಂಬಿಲ್ ಅವರ ವಿರುದ್ಧ 3600 ಮತಗಳ ಅಂತರದಿಂದ ಸೋತಿದ್ದಾರೆ.
ತ್ರಿಶೂರಿನಲ್ಲಿ ಎಲ್ ಡಿಎಫ್ ನ ಪಿ. ಬಾಲಚಂದ್ರನ್ ಜಯ ಗಳಿಸಿದ್ದರೆ, ಬಿಜೆಪಿಯ ಸುರೇಶ್ ಗೋಪಿ ಸೋಲನುಭವಿಸಿದ್ದಾರೆ.
2021ರ ಚುನಾವಣೆಯಲ್ಲಿ ಸೋತ ಪ್ರಮುಖರು, ಕ್ಷೇತ್ರ ವಿವರ ಇಲ್ಲಿದೆ:
ಸೋತವರು
- ಕೆ ಸುರೇಂದ್ರನ್-ಮಂಜೇಶ್ವರ- ಎನ್ ಡಿ ಎ
- ಇ ಶ್ರೀಧರನ್-ಪಾಲಕ್ಕಾಡ್- ಎನ್ ಡಿಎ
- ಸುರೇಶ್ ಗೋಪಿ-ತ್ರಿಸ್ಸೂರ್- ಎನ್ ಡಿಎ
- ಪಿ. ಸಿ ಜಾರ್ಜ್ -ಪೂಂಜಾರ್- ಪಕ್ಷೇತರ
- ಶೋಭಾ ಸುರೇಂದ್ರನ್ -ಕಾಳಕೂಟಮ್-ಎನ್ ಡಿ ಎ
- ಜಿ ಕೃಷ್ಣಕುಮಾರ್- ತಿರುವನಂತಪುರಂ-ಎನ್ ಡಿ ಎ
- ಕುಮ್ಮನಂ ರಾಜಶೇಖರನ್-ನೇಮಂ-ಬಿಜೆಪಿ
- ಧರ್ಮರಾಜನ್ ಬೊಲ್ಗಟ್ಟಿ-ಬಾಲುಚ್ಚೇರಿ-ಕಾಂಗ್ರೆಸ್
- ಜೋಸ್ ಕೆ ಮಣಿ-ಕೆಸಿ(ಎಂ)-(ಎಲ್ ಡಿ ಎಫ್)
- ಎಂ.ಟಿ ರಮೇಶ್- ಕೋಳಿಕ್ಕೋಡ್ ಉತ್ತರ -ಬಿಜೆಪಿ
- ಜೆ ಮರ್ಸಿಕುಟ್ಟಿ ಅಮ್ಮ-ಕುಂದರಾ-ಸಿಪಿಎಂ(ಎಲ್ ಡಿ ಎಫ್)
- ಎಸ್ ಶರತ್-ಚೆರ್ತಲಾ-ಕಾಂಗ್ರೆಸ್(ಯು ಡಿಎಫ್)
ಗೆದ್ದವರು
- ಧರ್ಮದಂ- ಪಿಣರಾಯಿ ವಿಜಯನ್ -ಸಿಪಿಎಂ(ಎಲ್ ಡಿ ಎಫ್)
- ಪಿ.ಜೆ ಜೋಸೆಫ್-ತೊಡುಪುಳ-ಕೆಸಿ(ಯುಡಿಎಫ್)
- ಕೆ.ಕೆ ರಮಾ-ವಟಕ್ಕಾರ-ಆರ್ ಎಂ ಪಿ(ಯುಡಿಎಫ್)
- ಮಣಿ ಸಿ ಕಪ್ಪನ್-ಪಾಲ- ಎನ್ ಸಿ ಕೆ(ಯುಡಿಎಫ್)
- ಉಮ್ಮನ್ ಚಾಂಡಿ-ಕಾಂಗ್ರೆಸ್-ಪುಥುಪಲ್ಲಿ
- ವಿ.ಕೆ ಪ್ರಸಾಂತ್- ವಟ್ಟಿಯೂರುಕಾವು-ಸಿಪಿಎಂ(ಎಲ್ ಡಿ ಎಫ್)
- ಕೆಟಿ ಜಲೀಲ್- ಥವನೂರ್- ಎಲ್ ಡಿ ಎಫ್
- ಕೆಕೆ ಶೈಲಜಾ-ಮಟ್ಟನೂರು- ಎಲ್ ಡಿ ಎಫ್
- ಕೆ ಯು ಜನೀಶ್ ಕುಮಾರ್-ಕೊನ್ನಿ-ಎಲ್ ಡಿ ಎಫ್
- ತಿರುವಾಂಚೂರ್ ರಾಧಾಕೃಷ್ಣನ್-ಕೊಟ್ಟಾಯಂ- ಯುಡಿಎಫ್
- ಎಂ ಮುಖೇಶ್-ಕೊಲ್ಲಂ-ಸಿಪಿಎಂ(ಎಲ್ ಡಿ ಎಫ್)
- ರಮೇಶ್ ಚೆನ್ನಿತಲ-ಹರಿಪದ್-ಕಾಂಗ್ರೆಸ್(ಯು ಡಿಎಫ್)
- ಯು ಪ್ರತಿಭಾ-ಕಯಾಂಕುಲಂ-ಸಿಪಿಎಂ(ಎಲ್ ಡಿ ಎಫ್)
- ಎಂಎಂ ಮಣಿ-ಉದಂಬಂಚೋಲ್-ಸಿಪಿಎಂ(ಎಲ್ ಡಿ ಎಫ್)
- ಪಿ.ವಿ ಅನ್ವರ್-ನೀಲಂಬೂರ್-ಪಕ್ಷೇತರ (ಎಲ್ ಡಿ ಎಫ್)
- Advertisement -