ಮಂಗಳೂರು: ಒಳಾಂಗಣ ವಿನ್ಯಾಸದ ಸಂಪೂರ್ಣ ವ್ಯವಸ್ಥೆಗಳನ್ನೊಳಗೊಂಡ ಭಾರತ್ ಇಂಟೀರಿಯರ್ ಡೆಕೋರ್ ಮಳಿಗೆ ಅ. 21ರಂದು ಮಂಗಳೂರಿನ ಕಂಕನಾಡಿಯಲ್ಲಿರುವ ಲಿಲಿಯಾ ಆರ್ಕೇಡ್ನಲ್ಲಿ ಶುಭಾರಂಭಗೊಂಡಿತು.
ನೂತನ ಮಳಿಗೆಯನ್ನು ಅತಿಥಿಗಳು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲಕರಾದ ಮುಹಮ್ಮದ್ ಅಯಾಝ್ ಮತ್ತು ಯಾಸಿರ್ ಅರಫಾತ್ರನ್ನು ಅವರ ತಾಯಿ ಅಭಿನಂದಿಸಿದರು.
ಬಳಿಕ ಮಾತನಾಡಿದ ಮುಹಮ್ಮದ್ ಅಯಾಝ್, ಕಳೆದ 30 ವರ್ಷದಿಂದ ನಗರದಲ್ಲಿ ನಮ್ಮ ಸಂಸ್ಥೆ ಉತ್ತಮ ಸೇವೆಗಳನ್ನು ನೀಡುತ್ತಾ ಬಂದಿದ್ದು, ಇದೀಗ ನಗರದ ಹೃದಯ ಭಾಗದಲ್ಲಿ ಮೂರನೇ ಮಳಿಗೆ ತೆರೆದಿದ್ದೇವೆ. ಗ್ರಾಹಕರು ತಮಗೆ ಬೇಕಾಗುವ ಡಿಸೈನ್ಗಳನ್ನು ನೇರವಾಗಿ ನೋಡಿಯೇ ಆಯ್ಕೆ ಮಾಡಬಹುದು. ಅಷ್ಟೊಂದು ಸಂಗ್ರಹಗಳು ನಮ್ಮಲ್ಲಿ ಇದೆ ಎಂದವರು ಹೇಳಿದರು.
ಇನ್ನು ಈ ಸಂಸ್ಥೆಯು ಉತ್ತಮ ಸೇವೆಗಳನ್ನು ನೀಡಿದ್ದಕ್ಕೆಯೆ ಇಂದು ಈ ಮಟ್ಟಕ್ಕೆ ಬೆಳೆದಿದೆ. ಇದೀಗ ವಿಸ್ತೃತ ಮಳಿಗೆಯ ಮೂಲಕ ಗ್ರಾಹಕರಿಗೆ ಮತ್ತಷ್ಟು ಸಹಕಾರಿಯಾಗಿದೆ ಎಂದು ಗ್ರಾಹಕರೋರ್ವರು ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ಅಳ್ವಾಸ್ ಆಂಡ್ ಅಸೋಸಿಯೇಟ್ನ ಸುಪ್ರಿತ್ ಆಳ್ವಾ, ಕೇಡಿಯಂ ಪ್ಲೈವುಡ್ನ ಶವಾಝ್ ಯಾಕೂಬ್, ಅನಿವಾಸಿ ಉದ್ಯಮಿ ಮುಹಮ್ಮದ್ ಅಶ್ರಫ್, ಹಕೀಂ, ಎಚ್ ಬಿ ಮಹಮ್ಮದ್, ಅಬ್ದುಲ್ ಜಲೀಲ್, ಬಿಲ್ಡಿಂಗ್ ಮಾಲಕ ಜೋಸೆಫ್ ಸಿಕ್ವೇರ ಮತ್ತಿತರರು ಉಪಸ್ಥಿತರಿದ್ದರು.