Monday, June 30, 2025
Homeಕರಾವಳಿಬೆಳ್ತಂಗಡಿ : ಎಳೆನೀರು ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಬೆಳ್ತಂಗಡಿ : ಎಳೆನೀರು ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

spot_img
- Advertisement -
- Advertisement -

ಬೆಳ್ತಂಗಡಿ : ತಾಲೂಕಿನಲ್ಲಿ ಭೀಕರ‌ ಮಳೆಯಿಂದ ಹಲವು ಮನೆಗಳು ಹಾನಿಯಾಗಿದ್ದು ಅದರಲ್ಲಿಯೂ ಬೆಳ್ತಂಗಡಿಯಿಂದ 100 ಕಿ.ಮೀ ದೂರದಲ್ಲಿರುವ ಬೆಳ್ತಂಗಡಿ ತಾಲೂಕಿನ ಎಳನೀರು ಗ್ರಾಮದ ಗುಥ್ಯದ್ಕ, ಹುಕ್ಕುಡ, ಕುರ್ಚಾರ್, ಸಂಪಿಗೆ ಕಟ್ಟೆ, ಈ ಪ್ರದೇಶಗಳಿಗೆ ತಹಶಿಲ್ದಾರ್ ಮಹೇಶ್.ಜೆ ಇವರು ಸೋಮವಾರ ಬೆಳಗ್ಗೆ ವಿಶೇಷ ಭೇಟಿ ನೀಡಿ ಭೀಕರ ಮಳೆಯಿಂದಾಗಿ ಗುಡ್ಡೆ ಜರಿದು ಹಾನಿಗೊಳಗಾದ ಸುಮರು 15 ಮನೆಗಳನ್ನು ಪರಿಶೀಲನೆ ನಡೆಸಿದರು.


ಈ ಸಂದರ್ಭದಲ್ಲಿ ಎಳನೀರು ಗ್ರಾಮ ಲೆಕ್ಕಾಧಿಕಾರಿ ರಾಘವೇಂದ್ರ , ಗ್ರಾಮ ಸಹಾಯಕ ಮಂಜುನಾಥ್, ಮಂಡಲ ಪಂಚಾಯತ್ ಮಾಜಿ ಉಪಾಧ್ಯಕ್ಷ ಅರುಣ್ ಕುಮಾರ್ ಜೊತೆಗಿದ್ದರು.


ಇಂತಹ ಪರಿಸ್ಥಿತಿಯಲ್ಲಿ ತಹಶೀಲ್ದಾರ್ ಭೇಟಿ ನೀಡಿದನ್ನು ಎಳನೀರು ಗ್ರಾಮಸ್ತರು ಕಂಡು ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ.
ತಹಶೀಲ್ದಾರ್ ಚಾಲಕ ಸಂತೋಷ್ ಕುಮಾರ್‌ ,ಅಭಿಲಾಷ್ ಈ ಸಂದರ್ಭದಲ್ಲಿ ಜೊತೆಗಿದ್ದರು.

ಎಳನೀರು ಪ್ರದೇಶದ ರಸ್ತೆ ತುಂಬ ಹದಕೆಟ್ಟಿರುವುದರಿಂದ ವಾಹನಗಳು ಹೋಗಲು ಅಗದಿದ್ದ ಕಾರಣ ತಹಶೀಲ್ದಾರ್ ಮಹೇಶ್.ಜೆ ಮತ್ತು ತಂಡ ಸಂಸೆ ಬಳಿ ಸರಕಾರಿ ವಾಹನ ನಿಲ್ಲಿಸಿ ಖಾಸಗಿ ಮಹೀಂದ್ರ ಜೀಪಿನಲ್ಲಿ ತೆರಳಿರುತ್ತಾರೆ.

- Advertisement -
spot_img

Latest News

error: Content is protected !!