- Advertisement -
- Advertisement -
ಬೆಳ್ತಂಗಡಿ: ಸಂಜೆವಾಣಿ ಪತ್ರಿಕೆಯ ವರದಿಗಾರ ಧನಕೀರ್ತಿ ಆರಿಗ ಧರ್ಮಸ್ಥಳ ಅವರು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉದಯವಾಣಿ ವರದಿಗಾರ ಪತ್ರಿಕೆಯ ಚೈತ್ರೇಶ್ ಇಳಂತಿಲ
ಪ್ರಧಾನ ಕಾರ್ಯದರ್ಶಿಯಾಗಿ, ಕೋಶಾಧಿಕಾರಿಯಾಗಿ ಸಂಯುಕ್ತ ಕರ್ನಾಟಕದ ವರದಿಗಾರ ಪುಷ್ಪರಾಜ್ ಶೆಟ್ಟಿ, ಪ್ರಜಾವಾಣಿಯ ವರದಿಗಾರ ಗಣೇಶ್ ಶಿರ್ಲಾಲು ಉಪಾಧ್ಯಕ್ಷರಾಗಿ, ಜೊತೆ ಕಾರ್ಯದರ್ಶಿಯಾಗಿ ಜಯಕಿರಣದ ವರದಿಗಾರ ಅಶ್ರಫ್ ಆಲಿಕುಂಞಿ ಮುಂಡಾಜೆ ಇವರು ಆಯ್ಕೆಯಾದರು.
ಉಳಿದಂತೆ ಸದಸ್ಯರಾಗಿ ದೇವಿಪ್ರಸಾದ್,ಮಂಜುನಾಥ ರೈ, ಬಿ.ಎಸ್ ಕುಲಾಲ್, ಬಿ ಜಾರಪ್ಪ ಪೂಜಾರಿ, ಶ್ರೀನಿವಾಸ ತಂತ್ರಿ, ಆಚುಶ್ರೀ ಬಾಂಗೇರು, ದೀಪಕ್ ಆಠವಳೆ, ಭುವನೇಶ್ಶರ ಜಿ, ಅರವಿಂದ ಹೆಬ್ಬಾರ್, ಆರ್.ಎನ್ ಪೂವಣಿ, ಹೃಷಿಕೇಶ್, ಶಿಬಿ ಧರ್ಮಸ್ಥಳ, ಪ್ರಸಾದ್ ಶೆಟ್ಟಿ, ಪದ್ಮನಾಭ ವೇಣೂರು, ಸಂಜೀವ ಎನ್.ಸಿ ಮತ್ತು ಗಣೇಶ್ ಶಿರ್ಲಾಲು ಇವರು ಮುಂದುವರಿಯಲಿದ್ದಾರೆ.
- Advertisement -