Sunday, June 29, 2025
Homeಕರಾವಳಿಮಹಾ ಎಕ್ಸ್‌ಪ್ರೆಸ್‌ 'ದೂರವಾಣಿಗೆ ಅನಾರೋಗ್ಯ' ವರದಿ ಫಲಶೃತಿ: ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ದೂರವಾಣಿಯ ಸಮಸ್ಯೆಗೆ ಮುಕ್ತಿ

ಮಹಾ ಎಕ್ಸ್‌ಪ್ರೆಸ್‌ ‘ದೂರವಾಣಿಗೆ ಅನಾರೋಗ್ಯ’ ವರದಿ ಫಲಶೃತಿ: ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ದೂರವಾಣಿಯ ಸಮಸ್ಯೆಗೆ ಮುಕ್ತಿ

spot_img
- Advertisement -
- Advertisement -

ಬೆಳ್ತಂಗಡಿ : ತಾಲೂಕು ಆರೋಗ್ಯ ಕೇಂದ್ರದಲ್ಲಿ ‘ದೂರವಾಣಿಗೆ  ಅನಾರೋಗ್ಯ’ ಕಾಡಿದೆ ಎಂಬ ಶೀರ್ಷಿಕೆ ವರದಿಯನ್ನು ಮಹಾ ಎಕ್ಸ್ ಪ್ರೆಸ್ ಶುಕ್ರವಾರ ಪ್ರಸಾರ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಆಸ್ಪತ್ರೆಯ ವೈದ್ಯಾಧಿಕಾರಿಗಳು ಶನಿವಾರ(ಇಂದು) ಎರಡು ಕಡೆ ಸಾರ್ವಜನಿಕ ಸೇವೆಯಲ್ಲಿರುವ ದೂರವಾಣಿಯನ್ನು ಸರಿಪಡಿಸಿದ್ದಾರೆ.

ಹಲವು ದೂರುಗಳು:  ಸರಕಾರಿ ಆಸ್ಪತ್ರೆಯ ಸಮಸ್ಯೆ ಬಗ್ಗೆ ಲೋಕಾಯುಕ್ತ ದಾಳಿ, ಎಸಿಬಿ ದಾಳಿ , ಶಾಸಕರ ಭೇಟಿ ತಹಶೀಲ್ದಾರ್ ಭೇಟಿ ಸೇರಿದಂತೆ ಹಲವು ವರ್ಷಗಳಿಂದ ನಡೆಯುತ್ತಾ ಬಂದ್ರು ಇಲ್ಲಿಯವರು ಮಾತ್ರ ಇನ್ನೂ ಎಚ್ಚೆತ್ತುಕೊಳ್ಳದೆ ನಿದ್ರೆಯಲ್ಲಿ ಇದ್ದಾರೆ‌. ಲೋಕಾಯುಕ್ತ ನ್ಯಾಯಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ದಾಳಿ ಮಾಡಿ ಇಲ್ಲಿಯವರಿಗೆ ಎಚ್ಚರಿಕೆ ಮಾತ್ರ ಕೊಟ್ಟಿದ್ದಾರೆ. ಆದ್ರೆ ಕ್ರಮ ಮಾತ್ರ ಇಲ್ಲಿಯವರೆಗೆ ಆಗಿಲ್ಲ ಇದರಿಂದ ಇವರಿಗೆ ಕ್ಯಾರೆ ಇಲ್ಲವಂತಾಗಿದೆ. ಈಗ ಮತ್ತೊಂದು ದೂರವಾಣಿ ಅನಾರೋಗ್ಯ ಪ್ರಕರಣ ಬೆಳಕಿಗೆ ಬಂದಿತ್ತು.

ದೂರವಾಣಿ ಸಮಸ್ಯೆ ವಿವರ: ಸರಕಾರಿ ಆಸ್ಪತ್ರೆಯಲ್ಲಿ ಎರಡು ಕಡೆ ಸಾರ್ವಜನಿಕ ಸೇವೆಗಾಗಿ ಬಿಎಸ್ಎನ್ಎಲ್ ಲ್ಯಾಂಡ್ ಲೈನ್ ದೂರವಾಣಿ ಇದೆ. ಆದ್ರೆ ಇದಕ್ಕೆ ಅನಾರೋಗ್ಯ ಶುರುವಾಗಿ ಆರು ತಿಂಗಳು ಆಗಿದ್ದರೂ ಆಸ್ಪತ್ರೆಯ ಅಧಿಕಾರಿಗಳು ಮಾತ್ರ ಇನ್ನೂ ನಿದ್ದೆಯ ಮಂಪರಿನಲ್ಲಿದ್ದಾರೆ. ತುರ್ತು ಚಿಕಿತ್ಸಾ ವಿಭಾಗದ 08256 232116 ಮತ್ತು ಹೊರರೋಗಿ ವಿಭಾಗದ 08256 233116 ನಂಬರಿನ ಈ ಎರಡು ಲ್ಯಾಂಡ್ ಲೈನ್ ದೂರವಾಣಿ ಇದೆ. ಇದು ಎರಡು ಫೋನ್ ಕೂಡ ಸಂಪೂರ್ಣ ಸಂಪರ್ಕ ಕಡಿದು ಹೋಗಿದೆ. ರೋಗಿಗಳು ಸ್ಕ್ಯಾನಿಂಗ್ ಬಗ್ಗೆ ಮಾಹಿತಿ ತಿಳಿಯಲು , ಅಂಗವಿಕಲರ ಗುರುತು ಚೀಟಿ ಮಾಹಿತಿ ಪಡೆಯುವ ಮುಂತಾದವುಗಳ ಮಾಹಿತಿ ತಿಳಿಯಲು ಕರೆ ಮಾಡಿದ್ರೆ ಯಾವುದೇ ಸಂಪರ್ಕಕ್ಕೆ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಆದ್ರೆ ಇದರ ಬಗ್ಗೆ ರೋಗಿಗಳು ದೂರು ನೀಡಿದರು. ಆಸ್ಪತ್ರೆಯ ವೈದ್ಯಾಧಿಕಾರಿ ಚಂದ್ರಕಾಂತ್ ಮಾತ್ರ ಸರಿಪಡಿಸಿ ರೋಗಿಗಳಿಗೆ ಅನುಕೂಲ ಮಾಡುವ ಬಗ್ಗೆ ತಲೆಕೆಡಿಸಿಕೊಂಡಿರಲ್ಲಿಲ್ಲ.

ಮಹಾಎಕ್ಸ್ ಪ್ರೆಸ್ ವರದಿ ಫಲಶೃತಿ: ಶುಕ್ರವಾರ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ‘ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ದೂರವಾಣಿಗೆ ಅನಾರೋಗ್ಯ’ ಎಂಬ ವರದಿ ಪ್ರಸಾರವಾದ ಬೆನ್ನಲ್ಲೆ ಎಚ್ಷೆತ್ತುಕೊಂಡು ಶನಿವಾರ(ಇಂದು) ಬೆಳ್ತಂಗಡಿ ತಾಲೂಕು ಕೇಂದ್ರದ ಆಸ್ಪತ್ರೆಯ ಸೂಪರಿಡೆಂಟ್ ಸುರೇಶ್ ಜೈನ್ ಅವರು ಬಿಟೆಲ್ ಕಂಪನಿಯ ಎರಡು ಹೊಸ ದೂರವಾಣಿ ಫೋನ್ ತಂದು ಹಾಕಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ.

- Advertisement -
spot_img

Latest News

error: Content is protected !!