- Advertisement -
- Advertisement -
ಮಂಗಳೂರು: ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ಆಚಾರಿ ವರ್ಗಾವಣೆಗೊಂಡಿದ್ದಾರೆ. ಉಡುಪಿ ಪ್ರಾದೇಶಿಕ ಅರಣ್ಯ ವಲಯದಲ್ಲಿ ಖಾಲಿ ಇದ್ದ ವಲಯ ಅರಣ್ಯಾಧಿಕಾರಿ ಹುದ್ದೆಗೆ ಸುಬ್ರಹ್ಮಣ್ಯ ಆಚಾರಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಇನ್ನು ಮಂಗಳೂರು ಅರಣ್ಯ ಸಂಚಾರಿ ಜಾಗೃತ ದಳದಲ್ಲಿ ಖಾಲಿ ಇದ್ದ ವಲಯ ಅರಣ್ಯಾಧಿಕಾರಿ ಹುದ್ದೆಗೆ ಶೃಂಗೇರಿ ವಲಯ ಅರಣ್ಯಾಧಿಕಾರಿ ಸಂಪತ್ ಪಟೇಲ್ ವರ್ಗಾವಣೆಗೊಂಡಿದ್ದಾರೆ. ಕೊಲ್ಲೂರು ವಲಯದಲ್ಲಿ ಕುದುರೆಮುಖ ವನ್ಯಜೀವಿ ವೇಳೆ ಭಾಗದ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ಅವರನ್ನು ಮೈಸೂರು ಲೀಗಲ್ ಅಂಡ್ ಐಸಿಟಿಯಲ್ಲಿ ಖಾಲಿ ಇದ್ದ ವಲಯ ಅರಣ್ಯಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಅರಣ್ಯ ಇಲಾಖೆ ಇಂದು ಹೊರಡಿಸಿರುವ ವರ್ಗಾವಣೆ ಆದೇಶದಲ್ಲಿ 27 ವಲಯ ಅರಣ್ಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಪೈಕಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಧಿಕಾರಿಗಳೂ ಸೇರಿದ್ದಾರೆ.
- Advertisement -