Friday, May 17, 2024
Homeಕರಾವಳಿಮಂಗಳೂರು: ಬೋಂದೆಲ್‌ನಲ್ಲಿ ತಡೆಗೋಡೆ ಕುಸಿತ, ಮಹಿಳೆ ಹಾಗೂ ಮಗುವಿನ ರಕ್ಷಣೆ

ಮಂಗಳೂರು: ಬೋಂದೆಲ್‌ನಲ್ಲಿ ತಡೆಗೋಡೆ ಕುಸಿತ, ಮಹಿಳೆ ಹಾಗೂ ಮಗುವಿನ ರಕ್ಷಣೆ

spot_img
- Advertisement -
- Advertisement -

ಮಂಗಳೂರು: ನಗರದ ಹೊರವಲಯದಲ್ಲಿರುವ ಕೃಷ್ಣನಗರ, ಬೊಂದೇಲ್‌ನಲ್ಲಿ ಶನಿವಾರ ತಡೆಗೋಡೆ ಕುಸಿದಿದೆ. ಭಾರೀ ಮಣ್ಣಿನ ರಾಶಿಯಡಿ ಸಿಲುಕಿದ್ದ ಮಹಿಳೆ ಮತ್ತು ಮಗುವನ್ನು ರಕ್ಷಿಸಲಾಗಿದೆ.

ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಮಗು ಅಪಾಯದಿಂದ ಪಾರಾಗಿದೆ ಎಂದು ವರದಿಯಾಗಿದೆ.

ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕೃಷ್ಣನಗರದಲ್ಲಿ ಜಲಸಿರಿ ಯೋಜನೆಯಡಿ ಕಾಮಗಾರಿ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಹಿಳೆ ಮತ್ತು ಮಗು ಉತ್ತರ ಕನ್ನಡ ಮೂಲದವರು. ಅಗೆಯುವ ಯಂತ್ರದ ಸಹಾಯದಿಂದ ಇಬ್ಬರನ್ನು ರಕ್ಷಿಸಲಾಗಿದೆ. ಮಹಿಳೆಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!