- Advertisement -
- Advertisement -
ಬಂಟ್ವಾಳ: ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷೆ ಯಶೋಧ ಬಿ ಇವರು ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ.
ಬಿಜೆಪಿ ಪಕ್ಷದಿಂದ ಸ್ಪರ್ದಿಸಿ ಭಂಡಾರಿ ಬೆಟ್ಟು ಕ್ಷೇತ್ರದಿಂದ ಸ್ಪರ್ಧಿಸಿ, ಬಂಟ್ವಾಳ ಪುರಸಭಾ ಸದಸ್ಯರಾಗಿ ಆಯ್ಕೆಯಾದ ಪ್ರಥಮ ಅವಧಿಯಲ್ಲಿ ಇವರು ಪುರಸಭಾ ಉಪಾಧ್ಯಕ್ಷೆಯಾಗಿದ್ದರು. ಹಾಗೆಯೆ ಎರಡನೇ ಬಾರಿ ಸದಸ್ಯರಾಗಿ ಆಯ್ಕೆಯಾದ ವೇಳೆ ಅಧ್ಯಕ್ಷೆ ಯಾಗಿಯೂ ಪುರಸಭೆಯಲ್ಲಿ ಆಡಳಿತ ಮಾಡಿದ ಮಹಿಳಾ ಜನಪ್ರತಿನಿಧಿ ಎಂಬ ಕೀರ್ತಿ ಯಶೋಧರಿಗೆ ಸಲ್ಲುತ್ತದೆ.
ಕುಲಾಲ ಸಮುದಾಯದ ಮುಂಚೂಣಿ ನಾಯಕಿಯಾಗಿದ್ದ ಇವರು ಪುತ್ತೂರು ಕುಂಬಾರರ ಗುಡಿಕೈಗಾರಿಕೆ ಸಂಘ.ನಿ.ದ ಮಾಜಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬೊರ್ ವೆಲ್ ಉದ್ಯಮಿ ಕಲ್ಲಡ್ಕ ಕೃಷ್ಣಪ್ಪ ಅವರ ಪತ್ನಿಯಾಗಿದ್ದಾರೆ. ಇವರು ಓರ್ವ ಮಗ ಮತ್ತು ಮಗಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
- Advertisement -