- Advertisement -
- Advertisement -
ಬಂಟ್ವಾಳ: ಹೊರರಾಜ್ಯದಿಂದ ಆಗಮಿಸುವ ಬಂಟ್ವಾಳ ಸುತ್ತಮುತ್ತಲಿನ ನಾಗರೀಕರ ಕ್ವಾರಂಟೈನ್ ವ್ಯವಸ್ಥೆಯ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನ ವಸತಿಗೃಹಗಳ ಮಾಲಕರ ಸಭೆಯು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಬಿ.ಸಿ.ರೋಡ್ ಕಚೇರಿಯಲ್ಲಿ ಇಂದು ನಡೆಯಿತು.
![](https://scontent.fbom20-1.fna.fbcdn.net/v/t1.0-9/97911474_2963656180389982_5582672132850057216_o.jpg?_nc_cat=106&_nc_sid=110474&_nc_ohc=xTixdQRNjl4AX8Y4xhB&_nc_ht=scontent.fbom20-1.fna&oh=569d3f417feac1cbefb02df42b0ba20e&oe=5EE6817C)
ಕ್ವಾರಂಟೈನ್ ನಲ್ಲಿರುವವರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಶಾಸಕ ರಾಜೇಶ್ ನಾಯ್ಕ್ ಅವರು ಸೂಚಿಸಿದರು. ಈ ಸಂದರ್ಭ ಲಾಡ್ಜ್ ಮಾಲೀಕರಿಗೆ ಮತ್ತು ಆಡಳಿತ ಸಿಬ್ಬಂದಿಗಳಿಗೆ ತಾಲೂಕು ತಹಶೀಲ್ದಾರ್ ರಶ್ಮೀ ಎಸ್.ಆರ್. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಸೂಕ್ತ ಸಲಹೆ,ಸೂಚನೆಗಳನ್ನು ನೀಡಿದರು.
![](https://scontent.fbom20-1.fna.fbcdn.net/v/t1.0-9/98012426_2963656343723299_5329014478199586816_o.jpg?_nc_cat=101&_nc_sid=110474&_nc_ohc=wMLsGHvtOxQAX-p3WBr&_nc_ht=scontent.fbom20-1.fna&oh=fed173f559fdd084e02669532e4d1f56&oe=5EE8DADA)
ಸಭೆಯಲ್ಲಿ ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಬಂಟ್ವಾಳ ನಗರ ಠಾಣೆಯ ಎಸ್ ಐ ಅವಿನಾಶ್, ಶಾಸಕರ ಆಪ್ತ ಕಾರ್ಯದರ್ಶಿ ದಿನೇಶ್ ಮತ್ತು ವಿವಿಧ ವಸತಿಗೃಹಗಳ ಮಾಲಕರು ಹಾಗೂ ಆಡಳಿತ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದರು.
![](https://scontent.fbom20-1.fna.fbcdn.net/v/t1.0-9/97512218_2963656620389938_4136205672444329984_o.jpg?_nc_cat=101&_nc_sid=110474&_nc_ohc=k1BvxWoaSI8AX-BdG_U&_nc_ht=scontent.fbom20-1.fna&oh=a1d2ef9f94bda659129ab821b38d5f62&oe=5EE92666)
- Advertisement -