Saturday, May 18, 2024
Homeಕರಾವಳಿಸಮಾರಂಭಗಳಿಗೆ ಹೋಗುವಾಗ ಮಕ್ಕಳಿಗೆ ಚಿನ್ನಾಭರಣ ಹಾಕುವ ಮುನ್ನ ಈ ಸುದ್ದಿ ಓದಿ; ಸುಳ್ಯದಲ್ಲಿ ಮದುವೆ ಹಾಲ್...

ಸಮಾರಂಭಗಳಿಗೆ ಹೋಗುವಾಗ ಮಕ್ಕಳಿಗೆ ಚಿನ್ನಾಭರಣ ಹಾಕುವ ಮುನ್ನ ಈ ಸುದ್ದಿ ಓದಿ; ಸುಳ್ಯದಲ್ಲಿ ಮದುವೆ ಹಾಲ್ ನಲ್ಲಿ ಮಗುವಿನ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಖದೀಮ

spot_img
- Advertisement -
- Advertisement -

ಸುಳ್ಯ; ಸಮಾರಂಭಗಳಿಗೆ ಹೋಗುವಾಗ  ಮಕ್ಕಳಿಗೆ ಚಿನ್ನಾಭರಣ ಹಾಕುವ ಪೋಷಕರು ಈ ಸುದ್ದಿಯನ್ನು ಓದಲೇ ಬೇಕು.  ಮದುವೆಗೆ ಚಿನ್ನದ ಸರ ಹಾಕಿಕೊಂಡು ಬಂದಿದ್ದ ಮಗುವಿನ ಕತ್ತಿನಿಂದ ಅಪರಿಚಿತ ವ್ಯಕ್ತಿಯೊಬ್ಬ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಸುಳ್ಯದಲ್ಲಿ ನಡೆದಿದೆ.

ಸುಳ್ಯದ ಕಾಯರ್ತೋಡಿ ದೇವಸ್ಥಾನದ ಹಾಲ್ ನಲ್ಲಿ ನಡೆದ ಮದುವೆಯೊಂದಕ್ಕೆ ಪೋಷಕರು ತಮ್ಮ 5 ವರ್ಷದ  ಮದುವೆಗೆ ತೆರಳಿದ್ದರು.ಈ ವೇಳೆ ವ್ಯಕ್ತಿ ಯೊಬ್ಬ ನೀರು ಕುಡಿಯಲೆಂದು ಹೋದ ಮಗುವನ್ನು ಸೈಡ್ ಗೆ ಕರೆದು ಆತನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕದ್ದೊಯ್ದಿದ್ದಾನೆ.ಈ ವೇಳೆ ಗಾಬರಿಯಾದ ಪೋಷಕರು ಅಪರಿಚಿತ ವ್ಯಕ್ತಿ ಗಾಗಿ ಹುಡುಕಾಟ ನಡೆಸಿದರೂ ಆತ ಪತ್ತೆಯಾಗಿಲ್ಲ ಎನ್ನಲಾಗಿದೆ.

ಈ ಘಟನಗೆ ಸಂಬಂಧಿಸಿ ಮಗುವಿನ ತಂದೆ ಶಿವಪ್ರಸಾದ್ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಗನ ಕುತ್ತಿಗೆಯಿಂದ ಸರವನ್ನು ಎಳೆಯುವ ಸಂದರ್ಭ ಕುತ್ತಿಗೆಯ ಮೇಲ್ಬಾಗಕ್ಕೆ ಮತ್ತು ಬಲಗಣ್ಣಿನ ಬಳಿಯಲ್ಲಿ ಎಡಕಿವಿಯ ಮೇಲ್ಬಾಗದಲ್ಲಿ ಸಣ್ಣ ಗಾಯಗಳಾಗಿವೆ. ಮದುವೆ ಹಾಲ್ ನಲ್ಲಿ ಸಿಸಿ ಕ್ಯಾಮರಾ ಇಲ್ಲದೇ ಇದ್ದುದರಿಂದ ಆತನನ್ನು ಹುಡುಕುವುದುಕ ಷ್ಟವಾಯಿತು.ಇದನ್ನೆ ದುರುಪಯೋಗ ಪಡಿಸಿಕೊಂಡ ಕಳ್ಳ ಈ ಕೃತ್ಯ ಎಸಗಿದ್ದು, ಆತನನ್ನು ಕೂಡಲೇ ಪತ್ತೆ ಹಚ್ಚಿ ನ್ಯಾಯ ಒದಗಿಸಿಕೊಡಬೇಕೆಂದು ದೂರಿನಲ್ಲಿ ಹೇಳಿದ್ದಾರೆ.

- Advertisement -
spot_img

Latest News

error: Content is protected !!