- Advertisement -
- Advertisement -
ಬೆಂಗಳೂರು; ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಸಾವಿನ ಬಗ್ಗೆ ಊಹಾಪೋಹಗಳನ್ನು ಹರಡಬೇಡಿ ಎಂದು ಸ್ಪಂದನಾ ಚಿಕ್ಕಪ್ಪ ಬಿ ಕೆ ಹರಿಪ್ರಸಾದ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಈಗಾಗಲೇ ಕುಟುಂಬಸ್ಥರು ಬ್ಯಾಂಕಾಕ್ ಗೆ ತೆರಳಿದ್ದು ನಾಳೆ ಮುಂಜಾನೆ ಪಾರ್ಥೀವ ಶರೀರ ಬೆಂಗಳೂರಿಗೆ ಆಗಮಸಲಿದೆ. ಇನ್ನು ಆಕೆಯ ಸಾವಿನ ಬಗ್ಗೆ ಬೇರೆ ಬೇರೆ ರೀತಿಯ ವದಂತಿಗಳು ಹರಡುತ್ತಿವೆ. ವೈಟ್ ಲಾಸ್ ಮಾಡಿದ್ದರಿಂದ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ರೀತಿಯ ಊಹಾಪೋಹಗಳನ್ನು ಹರಬೇಡಿ ಆಕೆ ಹೆಣ್ಣುಮಗಳು. ಪೋಸ್ ಮಾರ್ಟಂ ರಿಪೋರ್ಟ್ ಬಂದ ಮೇಲೆ ಎಲ್ಲವನ್ನು ನಾವು ನಿಮಗೆ ತಿಳಿಸುತ್ತೇವೆ. ಅಲ್ಲಿಯವರೆಗೆ ವದಂತಿಗಳನ್ನು ಹರಬೇಡಿ ಎಂದಿದ್ದಾರೆ.
- Advertisement -