Friday, June 27, 2025
Homeಉತ್ತರ ಕನ್ನಡಉತ್ತರಕನ್ನಡ : ಶಿರೂರು ಗುಡ್ಡ ಕುಸಿತ ಪ್ರಕರಣ; ಕಣ್ಮರೆಯಾಗಿದ್ದ ಬಾಲಕಿಯ ಮೃತದೇಹ ಪತ್ತೆ

ಉತ್ತರಕನ್ನಡ : ಶಿರೂರು ಗುಡ್ಡ ಕುಸಿತ ಪ್ರಕರಣ; ಕಣ್ಮರೆಯಾಗಿದ್ದ ಬಾಲಕಿಯ ಮೃತದೇಹ ಪತ್ತೆ

spot_img
- Advertisement -
- Advertisement -

ಉತ್ತರಕನ್ನಡ : ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಕಣ್ಮರೆಯಾಗಿದ್ದ ಬಾಲಕಿಯ ಮೃತದೇಹ ಪತ್ತೆಯಾಗಿದೆ.ಇಂದು ಬೆಳಿಗ್ಗೆ ನಾಪತ್ತೆಯಾಗಿದ್ದ 5 ವರ್ಷದ ಬಾಲಕಿ ಅವಂತಿಕಾ ಮೃತ ದೇಹ ಪತ್ತೆಯಾಗಿದೆ.

ಹೆದ್ದಾರಿ ಪಕ್ಕದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಲಕ್ಷ್ಮಣ ನಾಯಕ್, ಅವರ ಪತ್ನಿ ಶಾಂತಿ, ಪುತ್ರ ರೋಶನ್ , ಪುತ್ರಿ ಅವಂತಿಕಾ ಗುಡ್ಡ ಕುಸಿಯುತ್ತಿದ್ದಂತೆ ಮಣ್ಣುಪಾಲಾಗಿದ್ದರು. ಇವರಲ್ಲಿ ಲಕ್ಷಣ್ , ಶಾಂತಿ, ರೋಷನ್, ಟ್ಯಾಂಕರ್ ಚಾಲಕ, ಓರ್ವ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಇದೀಗ ಇಂದು ಬಾಲಕಿಯ ಮೃತ ದೇಹ ಪತ್ತೆಯಾಗಿದೆ.

ಗಂಗೆಕೊಳ್ಳದ ಸಮುದ್ರ ತೀರದಲ್ಲಿ 5 ವರ್ಷದ ಬಾಲಕಿ ಅವಂತಿಕಾ ಶವ ಪತ್ತೆಯಾಗಿದೆ.ತಕ್ಷಣ ಅವಂತಿಕಾಳ ಮೃತದೇಹವನ್ನು ಗೋಕರ್ಣದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಸದ್ಯ ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಇನ್ನು ಕೆಲವರು ಮಣ್ಣಿನಡಿ ಸಿಲುಕಿರುವ ಶಂಕೆ ಇದ್ದಿದ್ದರಿಂದ ಕಾರ್ಯಚರಣೆ ಮುಂದುವರೆದಿದೆ.

- Advertisement -
spot_img

Latest News

error: Content is protected !!