- Advertisement -
- Advertisement -
ಶಿರ್ವಾ: ಮುಂದರಂಗಡಿಯ ರಿಕ್ಷಾ ಚಾಲಕ ರಾಜೇಶ್ ದೇವಾಡಿಗ ಎಂಬವರು ಮನೆ ಕಟ್ಟಲು ಮಾಡಿದ್ದ ಸಾಲ ತೀರಿಸಲಾಗದೆ ಮನನೊಂದು ತಮ್ಮ ತಮ್ಮನಿಗೆ ಸೇರಿದ ಕ್ಯಾಟರ್ಸಸ್ನ ಶೆಡ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .
ಈ ಸಾವಿನಲ್ಲಿ ಸಂಶಯ ಇರುವುದಾಗಿ ಮೃತರ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇವರು ತಮ್ಮ ತಾಯಿಗೆ ಸೇರಿದ ಜಾಗದ ಪಾಲು ಆಗಿಲ್ಲ ಎಂದು ಮನ ನೊಂದಿದ್ದರು ಹಾಗೇ ಮನೆ ಕಟ್ಟಲು ಮಾಡಿದ್ದ ಸಾಲ ಹಾಗೂ ಇನ್ನಿತರ ಕೈ ಸಾಲವನ್ನು ತೀರಿಸಲಾಗದೆ ಮನನೊಂದಿದ್ದರು .
ಇದೇ ವೇದನೆಯಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಶಿರ್ವಾ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -