Saturday, June 28, 2025
Homeಕರಾವಳಿಉಡುಪಿಶಿರ್ವಾ: ರಿಕ್ಷಾ ಚಾಲಕ ನೇಣಿಗೆ ಶರಣು, ಪತಿಯ ಸಾವಿನ ಬಗ್ಗೆ ಪತ್ನಿಗೆ ಸಂಶಯ !

ಶಿರ್ವಾ: ರಿಕ್ಷಾ ಚಾಲಕ ನೇಣಿಗೆ ಶರಣು, ಪತಿಯ ಸಾವಿನ ಬಗ್ಗೆ ಪತ್ನಿಗೆ ಸಂಶಯ !

spot_img
- Advertisement -
- Advertisement -

ಶಿರ್ವಾ: ಮುಂದರಂಗಡಿಯ ರಿಕ್ಷಾ ಚಾಲಕ ರಾಜೇಶ್ ದೇವಾಡಿಗ ಎಂಬವರು ಮನೆ ಕಟ್ಟಲು ಮಾಡಿದ್ದ ಸಾಲ ತೀರಿಸಲಾಗದೆ ಮನನೊಂದು ತಮ್ಮ ತಮ್ಮನಿಗೆ ಸೇರಿದ ಕ್ಯಾಟರ್ಸಸ್‌ನ ಶೆಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .

ಈ ಸಾವಿನಲ್ಲಿ ಸಂಶಯ ಇರುವುದಾಗಿ ಮೃತರ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇವರು ತಮ್ಮ ತಾಯಿಗೆ ಸೇರಿದ ಜಾಗದ ಪಾಲು ಆಗಿಲ್ಲ ಎಂದು ಮನ ನೊಂದಿದ್ದರು ಹಾಗೇ ಮನೆ ಕಟ್ಟಲು ಮಾಡಿದ್ದ ಸಾಲ ಹಾಗೂ ಇನ್ನಿತರ ಕೈ ಸಾಲವನ್ನು ತೀರಿಸಲಾಗದೆ ಮನನೊಂದಿದ್ದರು .

ಇದೇ ವೇದನೆಯಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಶಿರ್ವಾ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!