Saturday, June 29, 2024
Homeಕರಾವಳಿಬಂಟ್ವಾಳ; ಪತಿಗೆ ಹೊಡೆಯಲು ಬಂದಾಗ ತಡೆದ ತುಂಬು ಗರ್ಭಿಣಿ ಮೇಲೆ ತಂಡದಿಂದ ಹಲ್ಲೆ

ಬಂಟ್ವಾಳ; ಪತಿಗೆ ಹೊಡೆಯಲು ಬಂದಾಗ ತಡೆದ ತುಂಬು ಗರ್ಭಿಣಿ ಮೇಲೆ ತಂಡದಿಂದ ಹಲ್ಲೆ

spot_img
- Advertisement -
- Advertisement -

ಬಂಟ್ವಾಳ; ಪತಿಗೆ ಹೊಡೆಯಲು ಬಂದಾಗ ತಡೆಯಲು ಬಂದ ತುಂಬು ಗರ್ಭಿಣಿ ಮೇಲೆ ಹಲ್ಲೆ ನಡೆಸಿರುವ ಆರೋಪ ಬಂಟ್ವಾಳ ತಾಲೂಕಿನ ಬರಿಮಾರು ಎಂಬಲ್ಲಿಂದ ಕೇಳಿ ಬಂದಿದೆ.

ಸಂಜೀವ ಪೂಜಾರಿ ಎಂಬವರ ಮೇಲೆ ಹಳೆಯ ದ್ವೇಷದ ಹಿನ್ನೆಲೆ ಆರೋಪಿಗಳಾದ ಕೋಟಿ ಯಾನೆ ಪುರಂದರ, ಬಾಲು ಯಾನೆ ಬಾಲಕೃಷ್ಣ, ಚಿನ್ನಯ ಯಾನೆ ಪುರುಷೋತ್ತಮ ಎಂಬವರು ಸಂಜೀವ ಪೂಜಾರಿ ಅವರ ಮನೆಗೆ ನುಗ್ಗಿ ಇವರ ಮಗನಾದ ಉಮೇಶ್ ಕೋಟ್ಯಾನ್ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದರು.ಅದೇ ವೇಳೆ ಹೊಡೆಯದಂತೆ ತಡೆಯಲು ಬಂದ ಉಮೇಶ್ ಅವರ ಪತ್ನಿ 9 ತಿಂಗಳ ಗರ್ಭಿಣಿಯಾಗಿರುವ ದಿವ್ಯಾ ಅವರ ಹೊಟ್ಟೆಯ ಭಾಗಕ್ಕೆ ಒದ್ದಿದ್ದಾರೆ .ಅಲ್ಲದೆ ಅವ್ಯಾಚ್ಚ ಶಬ್ದಗಳಿಂದ ಬೈದಿದ್ದಾರೆ. ಇದೇ ವೇಳೆ ಮನೆಯವರೆಗೆ ಜೀವ ಬೆದರಿಕೆ ಕೂಡ ಹಾಕಿ ಮನೆಯಿಂದ ಹೊರಗೆ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.


ಸದ್ಯ ತುಂಬಿ ಗರ್ಭಿಣಿ ದಿವ್ಯಾ ಅವರನ್ನು ಮಂಗಳೂರು ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇನ್ನು ಇದಕ್ಕೆ ಪ್ರತಿಯಾಗಿ ಪುರುಷೋತ್ತಮ ಅವರು ದೂರು ‌ನೀಡಿದ್ದು,ಅಡಿಕೆ ಸುಲಿಯುವ ಕೆಲಸ ಮಾಡಿ ವಾಪಸು ಮನೆಗೆ ನಡೆದುಕೊಂಡು ಬರುತ್ತಿರುವ ವೇಳೆ ಕ್ಷುಲ್ಲಕ ವಿಚಾರಕ್ಕೆ ಮೂರ್ತೆ ಕೆಲಸ ಮಾಡುವ ಸಂಜೀವ ಪೂಜಾರಿ ಮತ್ತು ಅವರ ತಂಡವರಾದ ಉಮೇಶ್ ಕೋಟ್ಯಾನ್, ಪದ್ಮನಾಭ, ದಿವ್ಯಾ ಅವರು ಹಲ್ಲೆ ನಡೆಸಿದ್ದಾರೆ ಮತ್ತು ಶೇಂದಿ ತೆಗೆಯುವ ಕತ್ತಿಯಿಂದ ಕೊಲ್ಲಲು ನೋಡಿದ್ದಾರೆ. ಆದರೆ ಕತ್ತಿಯಿಂದ ಕುತ್ತಿಗೆಗೆ ಬೀಸುವ ವೇಳೆ ತಪ್ಪಿಸಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದು, ಕೊಲ್ಲುವ ಬೆದರಿಕೆ ಮತ್ತೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!