Tuesday, July 2, 2024
Homeಕರಾವಳಿಉಡುಪಿಉಡುಪಿ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಟ್ಕಾ ಜುಗಾರಿಗೆ ದಾಳಿ, 6 ಮಂದಿ ವಶ !

ಉಡುಪಿ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಟ್ಕಾ ಜುಗಾರಿಗೆ ದಾಳಿ, 6 ಮಂದಿ ವಶ !

spot_img
- Advertisement -
- Advertisement -

ಉಡುಪಿ: ಜಿಲ್ಲೆಯಲ್ಲಿ ವ್ಯಾಪಕವಾಗಿ ಮಟ್ಕಾ ಜುಗಾರಿ ದಂಧೆ ನಡೆಯುತ್ತಿದ್ದು, ಇದನ್ನು ನಿಯಂತ್ರಿಸಲು ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಉಡುಪಿ ಹಾಗೂ ಬೈಂದೂರಿನಲ್ಲಿ 6 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ . ನಗರ ಠಾಣಾ ಪೊಲೀಸರು ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟಕ್ಕೆ ಹಣ ಸಂಗ್ರಹಿಸುತ್ತಿದ್ದ ನಿತಿನ್ ಪೂಜಾರಿ ಎಂಬಾತನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ 1,530 ರೂ . ನಗದು , ಒಂದು ಮೊಬೈಲ್ ಹಾಗೂ ಇತರೆ ಸುತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಹಾಗೇ ಉಪ್ಪುಂದದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಡ್ಡೆಗೆ ದಾಳಿ ನಡೆಸಿದ ಬೈಂದೂರು ಠಾಣಾ ಪೊಲೀಸರು ಜುಗಾರಿ ಆಡುತ್ತಿದ್ದ ಕೃಷ್ಣ ಖಾರ್ವಿ , ಜಟ್ಟ ದೇವಾಡಿಗ , ಲಕ್ಷ್ಮಣ ಖಾರ್ವಿ , ವಸಂತ ದೇವಾಡಿಗ ಕೇಶವ ಖಾರ್ವಿ ಇವರನ್ನು ವಶಕ್ಕೆ ಪಡೆದು , ಸ್ಥಳದಲ್ಲಿ ಇದ್ದ 3600 ರೂ . ನಗದು ಹಾಗೂ ಇತರೆ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!