Wednesday, May 15, 2024
Homeತಾಜಾ ಸುದ್ದಿಬಂಟ್ವಾಳ: ವಕೀಲರ ಸಂಘದಿಂದ ಆಟಿಡೊಂಜಿ ದಿನತ್ತ ತಮ್ಮನದ ಲೇಸು ಕಾರ್ಯಕ್ರಮ ಆಯೋಜನೆ: ವಿಧಾನ ಪರಿಷತ್ ಸದಸ್ಯ...

ಬಂಟ್ವಾಳ: ವಕೀಲರ ಸಂಘದಿಂದ ಆಟಿಡೊಂಜಿ ದಿನತ್ತ ತಮ್ಮನದ ಲೇಸು ಕಾರ್ಯಕ್ರಮ ಆಯೋಜನೆ: ವಿಧಾನ ಪರಿಷತ್ ಸದಸ್ಯ ಭೋಜೇಗೌಡರಿಂದ ಕಾರ್ಯಕ್ರಮಕ್ಕೆ ಚಾಲನೆ

spot_img
- Advertisement -
- Advertisement -

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆ (ರಿ) ಮಂಗಳೂರು, ಇದರ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ, ದಿನಾಂಕ 16/8/2022 ನೇ ಮಂಗಳವಾರ ಮಧ್ಯಾಹ್ನ 1.00 ಕ್ಕೆ ಬಂಟ್ವಾಳದ ಪ್ರದಾನ ಸಿವಿಲ್ ನ್ಯಾಯಾಲಯದ ವಕೀಲರ ಸಂಘದಲ್ಲಿ ಆಟಿಡೊಂಜಿ ದಿನತ್ತ ತಮ್ಮನದ ಲೇಸು ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ ನ ಸದಸ್ಯರು ಅದ ಶ್ರೀ ಎಸ್. ಎಲ್. ಭೋಜೇಗೌಡ ಅವರು ದೀಪ ಪ್ರಜ್ವಲಿಸುವ ಮುಕಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ತುಳುನಾಡಿನ ಆಚಾರ-ವಿಚಾರ, ಸಂಸ್ಕೃತಿ, ಆಹಾರ ಪದ್ದತಿಯ ಬಗ್ಗೆ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಚಾಲಕರು ಅದ ಡಾl. ತುಕಾರಾಮ ಪೂಜಾರಿ ಯವರು ವಿವರವಾದ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರು ಅದ ಎಸ್. ಪಿ. ಚಂಗಪ್ಪ, ಜಿಲ್ಲಾ ಉಪಾಧ್ಯಕ್ಷ ಉಮೇಶ್ ಕುಮಾರ್.ವೈ, ವಕೀಲರಾದ ಹಾತಿಂ ಅಹಮದ್, ವಕೀಲರ ಸಂಘ (ರಿ) ಬಂಟ್ವಾಳದ ಅಧ್ಯಕ್ಷರು ಬಿ. ಗಣೇಶಾನಂದ ಸೋಮಯಾಜಿ ಉಪಸ್ಥಿತರಿದ್ದರು.

 ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರು ಶ್ರೀ ಸುರೇಶ್ ಪೂಜಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ದೀಪಕ್ ಕುಮಾರ್ ಪೆರಾಜೆ ಸ್ವಾಗತಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರೇಂದ್ರ ಎಂ ಸಿದ್ದಕಟ್ಟೆ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮವನ್ನು ನಿತಿನ್ ನಿರ್ವಹಿಸಿದರು. ಕಾರ್ಯಕ್ರಮದ ನಂತರ ಹಳ್ಳಿ ಸೊಗಡಿನ ಸವಿಯಾದ ತಿಂಡಿ ತಿನಸುಗಳನ್ನು ವಕೀಲ ಮಿತ್ರರು ಸವಿದರು.

- Advertisement -
spot_img

Latest News

error: Content is protected !!