- Advertisement -
- Advertisement -
ಕಡಬ: ಮನೆಕೆಲಸಕ್ಕೆಂದು ಬಂದಿದ್ದ ಇಬ್ಬರು ಮನೆಯಲ್ಲಿದ್ದ ದಂಪತಿಯ ಮೇಲೆ ಹಲ್ಲೆ ಮಾಡಿದ ಘಟನೆ ಕಡಬ ತಾಲೂಕಿನ ಪಂಜ ಗ್ರಾಮದಲ್ಲಿ ನಡೆದಿದೆ.
ಪಂಜ ಸಮೀಪದ ಪಂಬೆತ್ತಾಡಿ ಗ್ರಾಮದ ವಿಶ್ವನಾಥ್ ಮತ್ತು ಗಾಯತ್ರಿ ದಂಪತಿ ಹಲ್ಲೆಗೊಳಗಾದವರು. ದಂಪತಿ ಬೊಬ್ಬೆ ಹೊಡೆದಿದ್ದನ್ನು ಕೇಳಿಸಿಕೊಂಡು ಅಕ್ಕಪಕ್ಕದವರು ಓಡಿಬಂದಿದ್ರಿಂದ ಪ್ರಾಣಹಾನಿ ತಪ್ಪಿದೆ ಎಂದು ಹೇಳಲಾಗಿದೆ.
ಘಟನೆ ಸಂಬಂಧ ವರದರಾಜ್, ಸೈಫನ್ ಎಂಬಿಬ್ಬರನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ.
- Advertisement -