- Advertisement -
- Advertisement -
ಮಂಗಳೂರು : ಅಪ್ಪುವಿನ ಅಗಲಿಕೆ ನೋವಿನಲ್ಲೂ ಇಂದು ಪವರ್ ಸ್ಟಾರ್ ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ರು.
ಅಂತೆಯೇ ಮಂಗಳೂರಿನ ಕಲಾವಿದರೊಬ್ಬರು ಸೋಪಿನಲ್ಲಿ ಅಪ್ಪು ಚಿತ್ರ ರಚಿಸಿ ಅಭಿಮಾನ ಮೆರೆದಿದ್ದಾರೆ. ಮಂಗಳೂರಿನ ಗಣೇಶಪುರ ನಿವಾಸಿಯಾದ ಕಲಾವಿದ ದೇವಿಕಿರಣ್ ಸೋಪ್ನಲ್ಲಿ ಅಪ್ಪು ಚಿತ್ರ ಬಿಡಿಸಿದ್ದಾರೆ. ಕೇವಲ ಎರಡು ಗಂಟೆಗಳಲ್ಲಿ ಸೋಪ್ ಅನ್ನು ಗುಂಡು ಪಿನ್ ಮೂಲಕ ಕೊರೆದು ಪುನೀತ್ ರಾಜ್ಕುಮಾರ್ ಅವರ ಚಿತ್ರ ಅರಳಿಸಿದ್ದಾರೆ.
- Advertisement -