Saturday, June 28, 2025
Homeಕರಾವಳಿಮಂಗಳೂರುಕೋಮು ಗಲಭೆ ನಡೆಸುವ ದೂರದೃಷ್ಟಿ ಮತ್ತು ಅಶಾಂತಿ ಸೃಷ್ಟಿಸುವ ದುರುದ್ದೇಶದಿಂದ ಪಿತೂರಿ ನಡೆಸಿ ಧಾರ್ಮಿಕ ಭಾವನೆಗೆ...

ಕೋಮು ಗಲಭೆ ನಡೆಸುವ ದೂರದೃಷ್ಟಿ ಮತ್ತು ಅಶಾಂತಿ ಸೃಷ್ಟಿಸುವ ದುರುದ್ದೇಶದಿಂದ ಪಿತೂರಿ ನಡೆಸಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ

spot_img
- Advertisement -
- Advertisement -

ಮಂಗಳೂರು; ಕೋಮು ಗಲಭೆ ನಡೆಸುವ ದೂರದೃಷ್ಟಿ ಮತ್ತು ಅಶಾಂತಿ ಸೃಷ್ಟಿಸುವ ದುರುದ್ದೇಶದಿಂದ ಪಿತೂರಿ ನಡೆಸಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ ಡಿಪಿ ಐ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಎಸ್ ಮಂಗಳೂರು ಪೊಲೀಸ್ ಪೋಲೀಸ್ ಅಧೀಕ್ಷಕರಿಗೆ ಏ.17 ರಂದು ಮನವಿ ಮಾಡಿದ್ದಾರೆ

 ದಕ್ಷಿಣ ಕನ್ನಡದಲ್ಲಿ ಕೋಮು ಗಲಭೆ ನಡೆಸಿ ಅಶಾಂತಿ ಸೃಷ್ಟಿಸುವ ದುರುದ್ದೇಶದಿಂದ ಕಳೆದ ಹಲವು ದಿನಗಳಿಂದ ಕೆಲವೊಂದು ದುಷ್ಟಶಕ್ತಿಗಳು ಜಿಲ್ಲೆಯ ಹಲವು ಕಡೆಗಳಲ್ಲಿ ಮುಸ್ಲಿಮರ ಮತ್ತು ಕ್ರಿಶ್ಚಿಯನ್ ಸಮುದಾಯದ ಧಾರ್ಮಿಕ ಆಚರಣೆಗಳನ್ನು ಅವಹೇಳನ ಮಾಡಿ ಹಿಂದೂ ಧಾರ್ಮಿಕ ಸಂಪ್ರದಾಯ ಎಂದು ಕಾರಣ ನೀಡಿ ಕೆಲವೊಂದು ಇಲ್ಲದ ಆಚರಣೆಗಳನ್ನು ತಂದು ಇದರ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ಸೃಸ್ಟಿಸಿ ಸಮಾಜದಲ್ಲಿ ಅಶಾಂತಿ ಉಂಟುಮಾಡಿ ಒಂದು ಪ್ರಕ್ಷುಬ್ಧ ವಾತಾವರಣ ಸೃಸ್ಟಿಸಿ ಆ ಮೂಲಕ ರಾಜಕೀಯ ಲಾಭ ಪಡೆಯುವ ದುರುದ್ದೇಶವನ್ನು ಸಮಾಜಘಾತುಕ ಶಕ್ತಿಗಳು ನಡೆಸುತ್ತಿದೆ.

 ದಿನಾಂಕ 12-04-2025 ರಂದು ಮೂಡುಕೊಡಿ ಗ್ರಾಮದ ನೂವಿದಗೋಳಿ ಎಂಬಲ್ಲಿ ನಂzನ್, ಬಾಸ್ಕರ ಬೋಲೂರು, ಪ್ರವೀನ ಪಡ್ಲ (ಜಿನ್ನಮ್ಮ) ಯಶವಂತ್,ಕರುನಾಕರ ನೂವಿದಗೋಳಿ , ಶಶಿ ಉತುಲ್ಲೊಟ್ಟು, ದರ್ನಪ್ಪ ನಾಯ್ಕ ಮೂಡೇಲು, ಉಮೇಶ ಬೋಲೂರು ,ಶಶಿ ಕೇಶವ ನಗರ, ವಿಜಯಾ. ದೋಗುನಾಯಕ, ಮತ್ತು ಇತರ 12 ಜನ ಸೇರಿಕೊಂಡು ಎಸ್ ಡಿ ಪಿ ಐ ಪಕ್ಷದ ಅಧಿಕೃತ ಧ್ವಜವನ್ನು ಕಳ್ಳತನ ಮಾಡಿ ದುರ್ಭಲಕೆ ಮಾಡಿರುತ್ತಾರೆ ಹಾಗೂ ಮುಸ್ಲಿಮರ ಆಚಾರ ,ಸಂಪ್ರದಾಯಗಳನ್ನು ವ್ಯಂಗ್ಯ ಮಾಡಿ ಮುಸ್ಲಿಮರ ಧಾರ್ಮಿಕ ಬಾವಣೆಗಳಿಗೆ ಧಕ್ಕೆ ತಂದು ಆ ಮೂಲಕ ಮುಸಲ್ಮಾನರ ಬಾವಣೆಗಳನ್ನು ಕೆರಳಿಸಿ ಸಮಾಜದಲ್ಲಿ ಕೋಮು ಗಲಭೆ ಉಂಟುಮಾಡುವ ದುರುದ್ದೇಶದಿಂದ ಕೃತ್ಯ ನಡೆಸಿರುತ್ತಾರೆ.ಈ ಕುರಿತು ಎಸ್ಡಿಪಿಐ ವತಿಯಿಂದ ವೇಣೂರು ಠಾಣೆಯಲ್ಲಿ ಕೇಸು ನೀಡಿರುತ್ತೇವೆ.ಆದರೆ ಪೋಲೀಸರು ಯಾವುದೇ ರೀತಿಯ ಕಾನೂನು ಕ್ರಮವನ್ನು ಆರೋಪಿತರ ಮೇಲೆ ಕೈಗೊಂಡಿರುವುದಿಲ್ಲ ಮತ್ತು ಪ್ರಕರಣ ದಾಖಲಿಸಿರುವುದಿಲ್ಲ. ಪೋಲೀಸರ ಈ ರೀತಿಯ ವರ್ತನೆಯಿಂದ ನಿನ್ನೆ ದಿನಾಂಕ 16-04-2025 ರಂದು ವೇಣೂರು ಠಾಣಾ ವ್ಯಾಪ್ತಿಯ ಪೆರಾಡಿ ಗ್ರಾಮದ ರಂಜಿತ್ ಶೆಟ್ಟಿ ಪೆರಾಡಿ ಮತ್ತು ಸುಜಿತ್ ಶೆಟ್ಟಿ ಯವರ ಮನೆಯಲ್ಲಿ ಅಂತು ಸಾವ್ಯ , ದಯಾನಂದ ಪೆರಾಡಿ ,ರಾಜೇಶ್ ಸಾವ್ಯ , ಹರೀಶ್ ಸಾವ್ಯ ಮತ್ತು 15 ಜನರ ಗುಂಪು ಸೇರಿಕೊಂಡು ಮತ್ತೆ ಮುಸ್ಲಿಂ ಧಾರ್ಮಿಕ ಆಚರಣೆಗಳಿಗೆ ಅವಹೇಳನ ಮಾಡಿ ಪ್ರವಾದಿಯನ್ನು ನಿಂದಿಸಿರುತ್ತಾರೆ.ಆದ್ದರಿAದ ಹಿಂದೂ ಸಂಪ್ರದಾಯ ಆಚರಣೆಯ ನೆಪ ಇಟ್ಟುಕೊಂಡು ಮುಸ್ಲಿಮರ ಧಾರ್ಮಿಕ ಆಚರಣೆಗಳನ್ನು ಅವಹೇಳನ ಮಾಡಿ ಜಿಲ್ಲೆಯಲ್ಲಿ ಕೋಮುಗಲಭೆಯನ್ನು ಸೃಸ್ಟಿಸುವ ದುರುದ್ದೇಶದಿಂದ ಈ ಮೇಲೆ ತಿಳಿಸಿದ ವ್ಯಕ್ತಿಗಳು ಗುಂಪುಸೇರಿ ಪಿತೂರಿ ನಡೆಸಿದ್ದಾರೆ. ಇದು ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುವ ದುರುದ್ದೇಶದಿಂದ ಈ ರೀತಿಯ ಕೃತ್ಯವನ್ನು ನಡೆಸಿರುತ್ತಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿಲ್ಲ. ಆದ್ದರಿಂದ ಈ ಮೇಲಿನ ಸಮಾಜಘಾತುಕ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಪೊಲೀಸ್ ಇಲಾಖಾ ವತಿಯಿಂದ ಜರುಗಿಸಬೇಕು, ಹಾಗೂ ಸಮಾಜದಲ್ಲಿ ಶಾಂತಿ ಸಾಮರಸ್ಯ ನೆಲೆಗೊಳ್ಳುವಂತೆ ಈ ಮೂಲಕ ವಿನಂತಿಸುತ್ತಿದ್ದೇನೆ ಎಂದಿದ್ದಾರೆ.

- Advertisement -
spot_img

Latest News

error: Content is protected !!