- Advertisement -
- Advertisement -
ಉಪ್ಪಿನಂಗಡಿ: ತನಗೆ ಬರಬೇಕಾದ ಜಾಗದ ಹಣವನ್ನು ಕೇಳಿದ್ದಕ್ಕೆ ಒಬ್ಬ ವ್ಯಕ್ತಿ ವೃದ್ಧೆಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಒಳಗಾಗಿರುವ ವೃದ್ಧೆ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಜತ್ತೂರು ಗ್ರಾಮದ ಹಿರ್ತಿಲ ನಿವಾಸಿ ಆಮಿನಾ ಹಲ್ಲೆಗೆ ಒಳಗಾಗಿರುವ ವೃದ್ಧೆ . ಹಲ್ಲೆ ನಡೆಸಿರುವ ಆರೋಪಿ ಬಜತ್ತೂರು ಗ್ರಾಮದ ವಳಾಲು ಸಮೀಪದ ಹಿರ್ತಿಲ ನಿವಾಸಿ ಬಿ.ಹೆಚ್ಅಬೂಬಕ್ಕರ್ ಎಂದು ತಿಳಿದು ಬಂದಿದೆ.
ಇವರಿಬ್ಬರಿಗೂ ಜಾಗದ ತಕರಾರು ಇತ್ತು , ಈ ಸಂಬಂಧ ಜಾಗದ ಹಣ ಕೊಡುವಂತೆ ಆಮಿನಾ ಕೇಳಿದಾಗ ಕೊಂದು ಬಿಡುವುದಾಗಿ ಹೇಳಿ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ಆಮಿನಾ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ್ದಾರೆ. ಉಪ್ಪಿನಂಗಡಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
- Advertisement -