ಉಡುಪಿ: ನಾನು ಹೊಸಬನೂ ಅಲ್ಲ ಹಳಬನೂ ಅಲ್ಲ, ನಾನು ಮಧ್ಯದಲ್ಲಿ ಇರುವ ಶಾಸಕ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಬಿಜೆಪಿಯಲ್ಲಿ ಹೊಸತನಕ್ಕೆ ಅವಕಾಶ ಕೊಡುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ರಘುಪತಿ ಭಟ್, ಬಿಜೆಪಿಯಲ್ಲಿ ಯಾವತ್ತು ಹೊಸತನ ಇದ್ದೇ ಇದೆ
ನಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವ ಇದೆ ಆಂತರಿಕ ಚರ್ಚೆ ನಡೆಯುತ್ತದೆ ಎಂದು ಹೇಳಿದ್ದಾರೆ.
ಜನಾಭಿಪ್ರಾಯ ಸಂಗ್ರಹಿಸುವ ವ್ಯವಸ್ಥೆಗಳು ನಮ್ಮ ಪಕ್ಷದಲ್ಲಿ ಇದೆ, ಕಾರ್ಯಕರ್ತರ ಅಭಿಪ್ರಾಯಗಳನ್ನು ತೆಗೆದುಕೊಳ್ಳುವ ಪದ್ಧತಿ ಬಿಜೆಪಿಯಲ್ಲಿದೆ ಎಂದಿರುವ ರಘುಪತಿ ಭಟ್,
ಹೊಸಬರು ಬಂದು ಬಂದು ಹೊಸ ನಾಯಕತ್ವ ಸೃಷ್ಟಿಯಾಗುತ್ತದೆ, ರಾಜ್ಯದಲ್ಲಿ ಹೊಸದಾಗಿ ನಾಯಕತ್ವ ಬಂದೇ ಬರುತ್ತದೆ ಎಂದು ಹೇಳಿದ್ದಾರೆ.
2004ರಲ್ಲಿ ಹೊಸಬನಾಗಿದ್ದ ನನಗೆ ಅವಕಾಶ ಕೊಟ್ಟರು. ನಾವು ಎಲ್ಲದಕ್ಕೂ ಮಾನಸಿಕವಾಗಿ ತಯಾರಾಗಿಯೇ ಇದ್ದೇವೆ ನನ್ನನ್ನು ಬಿಟ್ಟು ಬೇರೆಯವರಿಗೆ ಅವಕಾಶ ಕೊಟ್ಟರೆ
ನಾನು ಅದಕ್ಕೆ ಮಾನಸಿಕವಾಗಿ ತಯಾರಿದ್ದೇನೆ ಎಂದು ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.