- Advertisement -
- Advertisement -
ಕಾಸರಗೋಡು;: ಬಾಯಾರು ಕನಿಯಾಲ ಅನಂತಗಿರಿಯ ಗೋಪಾಲ ನಾಯಕ್ ಎಂಬವರ ಪುತ್ರ ಅಡ್ಯನಡ್ಕ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಕಿತ್ ನಾಯಕ್ ಭಾನುವಾರ ಸಂಜೆಯಿಂದ ನಾಪತ್ತೆಯಾಗಿದ್ದಾನೆ.
ಸಂಜೆ ಪಕ್ಕದ ಮನೆಗೆ ಹೋಗಿ ಬರುತ್ತೇನೆಂದು ತಂದೆಯವರ KL14 T 9764 ಹೊಂಡಾ ಅಕ್ವಿವಾ ಗಾಡಿಯನ್ನು ತೆಗೆದುಕೊಂಡು ಹೋದವ ಬಳಿಕ ಬಾರದಿರುವುದನ್ನು ಗಮನಿಸಿ ಮನೆಯವರು ಸಂಜೆ 6 ಗಂಟೆಯಿಂದ ಹುಡುಕಾಟ ನಡೆಸಿದ್ದರು. ಈ ನಡುವೆ ಬೈಕನ್ನು ಬಾಯಾರು ಬಳ್ಳೂರು ಬಸ್ ಸ್ಟ್ಯಾಂಡ್ ಬಳಿ ನಿಲ್ಲಿಸಿ ಅಲ್ಲಿಂದ ಖಾಸಗಿ ಬಸ್ಸಿನಲ್ಲಿ ವಿಟ್ಲ ಕುದ್ದುಪದವು ಕಡೆಗೆ ತೆರಳಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ.
ಈ ಬಗ್ಗೆ ಮಂಜೇಶ್ವರ ಪೋಲಿಸ್ ಠಾಣೆಗೆ ದೂರು ನೀಡಲಾಗಿದ್ದು ವಿದ್ಯಾರ್ಥಿ ವಿಟ್ಲ ಭಾಗಕ್ಕೆ ತೆರಳಿರುವ ಹಿನ್ನಲೆಯಲ್ಲಿ ಕರ್ನಾಟಕ ಪೋಲಿಸರಿಗೂ ತನಿಖೆಗೆ ಮನವಿ ಮಾಡಲಾಗಿದೆ. ಈ ನಡುವೆ ಯಾರಾದರೂ ಕಂಡವರಿದ್ದರೆ ತಕ್ಷಣ 7829764213,8086247293 ನಂಬ್ರಕ್ಕೆ ಕರೆ ಮಾಡಿ ಮಾಹಿತಿ ನೀಡಲು ಮನವಿ ಮಾಡಲಾಗಿದೆ.
- Advertisement -