Friday, June 27, 2025
Homeಕರಾವಳಿಪುತ್ತೂರು: ಬಂಧನಕ್ಕೆ ಒಳಗಾಗಿದ್ದ ನಟ ವಿನೋದ್ ಆಳ್ವಗೆ ಜಾಮೀನು

ಪುತ್ತೂರು: ಬಂಧನಕ್ಕೆ ಒಳಗಾಗಿದ್ದ ನಟ ವಿನೋದ್ ಆಳ್ವಗೆ ಜಾಮೀನು

spot_img
- Advertisement -
- Advertisement -

ಪುತ್ತೂರು :‌ ಹಲ್ಲೆ ಆರೋಪದಡಿ ಬಂಧನಕ್ಕೊಳಗಾಗಿದ್ದ ನಟ ವಿನೋದ್‌ ಆಳ್ವಾ ಅವರಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಅವರಿಗೆ ಏ.26ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ.

ಪಡುವನ್ನೂರಿನ ಉದಯ ಎಂಬವರು ತನ್ನ ಮೇಲೆ ವಿನೋದ್ ಆಳ್ವ ಹಾಗೂ ದೀಕ್ಷಿತ್ ಎಂಬವರು ಹಲ್ಲೆ ಮಾಡಿದ್ದಾರೆ ಎಂದು  ದೂರು ನೀಡಿದ್ರು. ಅದರಂತೆ ನಟ ವಿನೋದ್‌ ಆಳ್ವಾ ಬಂಧನಕ್ಕೆ ಒಳಗಾಗಿದ್ರು. ಇದೀಗ ಅವರಿಗೆ ಜಾಮೀನು ಸಿಕ್ಕಿದೆ.

ಅಂದ್ಹಾಗೆ, ಇವ್ರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗ್ರಾಮದ ಪುತ್ತೂರಿನ ಪಡುಮಲೆ ನಾಗಬ್ರಹ್ಮ ದೇವಾಲಯ ರಸ್ತೆ ಕಾಮಗಾರಿ ವಿಚಾರದಲ್ಲಿ ವಿನೋದ್ ಆಳ್ವ ಗಲಾಟೆ ಮಾಡಿಕೊಂಡಿದ್ರು. ನೀರಿನ ಪೈಪ್ ಒಡೆದು ಮನೆಗಳಿಗೆ ನೀರು ಪೂರೈಕೆ ಸ್ಥಗಿತ ಮಾಡಿದ್ರು. ಇದನ್ನ ಪ್ರಶ್ನಿಸಿದ್ದ ಉದಯ್‌ ಎನ್ನುವವವರ ಮೇಲೆ ವಿನೋದ್‌, ದೀಕ್ಷಿತ್‌ ಹಲ್ಲೆ ಮಾಡಿದ್ರು ಎಂದು ಆರೋಪಿಸಲಾಗಿದೆ.

 ಈ ಕುರಿತು ಸಂಪ್ಯ ಠಾಣೆಗೆ ದೂರು ನೀಡಿದ್ದ ಉದಯ್‌, ಜಾತಿ ನಿಂದನೆ ಆರೋಪದಡಿ ಕೇಸ್‌ ದಾಖಲಿಸಿದ್ರು. ಸಧ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿನೋದ್‌ ಆಳ್ವಗೆ ಮಧ್ಯಂತರ ಜಾಮೀನು ಮಂಜೂರಾಗಿದೆ.

- Advertisement -
spot_img

Latest News

error: Content is protected !!