Friday, May 17, 2024
Homeಕರಾವಳಿತುಳು ರಂಗಭೂಮಿ ಕಲಾವಿದ ಸುಂದರ್ ರೈ ಮಂದಾರ ಕಾರು ಅಪಘಾತ

ತುಳು ರಂಗಭೂಮಿ ಕಲಾವಿದ ಸುಂದರ್ ರೈ ಮಂದಾರ ಕಾರು ಅಪಘಾತ

spot_img
- Advertisement -
- Advertisement -

ಮಾಣಿ: ತುಳು ರಂಗಭೂಮಿ ಮತ್ತು ಚಲನಚಿತ್ರದಲ್ಲಿ ‘ರಂಗ್ ದ ರಾಜೆ’ ಎಂದೇ ಬಿರುದು ಪಡೆದಿರುವ ಖ್ಯಾತ ನಟ ಸುಂದರ್ ರೈ ಮಂದಾರ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಗುದ್ದಿದ ಘಟನೆ ಬಂಟ್ವಾಳ ತಾಲೂಕಿನ ಸೂರಿಕುಮೇರು ಸಮೀಪದ ದಾಸಕೋಡಿಯಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 75ರ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ಸುಂದರ್ ರೈ ಮಂದಾರ ಜೊತೆ ಮತ್ತೊಬ್ಬ ನಟ ಚಂದ್ರಹಾಸ ಅನಂತಾಡಿ ಸಹ ಪ್ರಯಾಣಿಸುತ್ತಿದ್ದರು.

ಅಪಘಾತದ ವೇಳೆ ವಿದ್ಯುತ್ ಕಂಬ ತುಂಡಾಗಿ, ವಿದ್ಯುತ್ ತಂತಿ ಕಾರಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಇಬ್ಬರು ಖ್ಯಾತ ನಟರಿಗೆ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ.

- Advertisement -
spot_img

Latest News

error: Content is protected !!