- Advertisement -
- Advertisement -
ಬೆಳ್ತಂಗಡಿ: ಕರಾವಳಿಯಲ್ಲಿ ಇಂದು ಸಂಭ್ರಮದ ಆಯುಧ ಪೂಜೆ ನಡೆಯುತ್ತಿದ್ದು, ಬೆಳ್ತಂಗಡಿ ತಾಲೂಕು ಕಛೇರಿ ಮುಂಭಾಗದಲ್ಲಿ ವಿವಿಧ ಸರ್ಕಾರಿ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು.
ತಾಲೂಕು ಕಚೇರಿ , ತಾಲೂಕು ಪಂಚಾಯತ್ ಇಲಾಖೆ, ನಗರ ಪಂಚಾಯತ್ , ಕೃಷಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಎಪಿಎಂಸಿ ಇಲಾಖೆ , ಸಮಾಜಿಕ ಅರಣ್ಯ ಇಲಾಖೆ ವಾಹನಗಳಿಗೆ ಪೂಜೆ ನಡೆಸಲಾಯಿತು.
ಮಹಿಷನನ್ನು ಸಂಹರಿಸಲು ದುರ್ಗಾ ದೇವಿ ಉಪಯೋಗಿಸಿದ ಆಯುಧಗಳನ್ನು ಭೂಲೋಕಕ್ಕೆ ಎಸೆದಿದ್ದು, ದೇವಿ ಎಸೆದ ಆಯುಧಗಳನ್ನು ಮನುಷ್ಯರು ತಂದು ಪೂಜಿಸಲು ಆರಂಭಿಸಿದರು. ಇದೇ ಮುಂದೆ ಆಯುಧ ಪೂಜೆಯಾಗಿ ಆಚರಣೆಗೆ ಬಂತು.
- Advertisement -