- Advertisement -
- Advertisement -
ಬೆಳ್ತಂಗಡಿ : ಕಳೆದ ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ಮಲವಂತಿಗೆ ಗ್ರಾಮದ ವಿವಾಹಿತ ಯುವಕನೊವ೯ ಮಂಗಳೂರಿನ ರೂಮಿನಲ್ಲಿ ನೇಣುಬಿಗಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.4 ರಂದು ನಡೆದಿದೆ. ಪ್ರದೀಪ್ ( 32ವ ) ಆತ್ಮಹತ್ಯೆ ಮಾಡಿಕೊಂಡವರು.
ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಪರಾರಿ ನಿವಾಸಿ ಕೃಷ್ಣಪ್ಪ ಪೂಜಾರಿ ಮತ್ತು ಲೀಲಾ ದಂಪತಿಯ ಮೂರನೇ ಪುತ್ರ ಮಂಗಳೂರಿನಲ್ಲಿ ಹೊಟೇಲ್ ನಲ್ಲಿ ಉದ್ಯೋಗ ಮಾಡಿಕೊಂಡಿದ್ದ. ಪ್ರದೀಪ್ ಕಳೆದ ಮೂರು ತಿಂಗಳ ಹಿಂದೆ ಪ್ರೀತಿಸಿ ಅತ್ತೆ ಮಗಳನ್ನು ಸ್ಥಳೀಯ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ದಂಪತಿ ಮಂಗಳೂರಲ್ಲಿ ವಾಸವಾಗಿದ್ದು. ಡಿ.3 ರಂದು ಮನೆಗೆ ಬಂದು ಹೋಗಿದ್ದರು. ಡಿ.4 ರಂದು ಸಂಜೆ ಮಂಗಳೂರು ರೂಮಿನಲ್ಲಿ ನೇಣುಬಿಗಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
- Advertisement -