- Advertisement -
- Advertisement -
ಮಂಗಳೂರು: ಯುವಕನಿಗೆ ಗ್ಯಾಂಗ್ ಒಂದು ಹಲ್ಲೆ ನಡೆಸಿರುವ ಘಟನೆ ಸುರತ್ಕಲ್ ನ ಮುಂಚ್ಚೂರು ಎಂಬಲ್ಲಿ ನಡೆದಿದೆ.ಸುರತ್ಕಲ್ ಸಮೀಪ ರಸ್ತೆ ಮಧ್ಯೆ ನಿಲ್ಲಿಸಿದ್ದ ಟಿಪ್ಪರ್ ಲಾರಿಗಳನ್ನು ತೆರವು ಮಾಡುವಂತೆ ಹೇಳಿದ್ದಕ್ಕಾಗಿ ತಂಡವೊಂದು ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಬಂಧಿತ ಆರೋಪಿಗಳು ದಿವಾಕರ, ನವೀನ್, ಯಶೋಧರ, ರವಿ ಎಂದು ಗುರುತಿಸಲಾಗಿದೆ.
ಹಲ್ಲೆಗೊಳಗಾದವರು ಕಾಟಿಪಳ್ಳದ ಡೆಕ್ಕನ್ ವಿಲ್ಲಾ ನಿವಾಸಿ ಅಬೂಬಕರ್ ಎಂದು ತಿಳಿಯಲಾಗಿದೆ. ಅಬೂಬಕರ್ ಹಲ್ಲೆಯಿಂದ ಗಂಭೀರ ಗಾಯಗೊಂಡ ನಗರದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಗೆ ನಡೆಸುತ್ತಿದ್ದಾರೆ.
- Advertisement -