- Advertisement -
- Advertisement -
ಚಿಕ್ಕಮಗಳೂರು: ಬಾಯ್ಲರ್ ರಿಪೇರಿ ಮಾಡುತ್ತಿದ್ದಾಗ ಏಕಾಏಕಿ ಭಾರೀ ಪ್ರಮಾಣದಲ್ಲಿ ಬಿಸಿ ಗಾಳಿ ಹೊರಬಂದು ಯುವಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರ ಹೊರವಲಯ ವಿದ್ಯಾ ಕಾಫಿ ಕ್ಯೂರಿಂಗ್ ಘಟಕದಲ್ಲಿ ನಡೆದಿದೆ. ಮಡಿಕೇರಿಯ ಕುಶಾಲನಗರದ ಯುವಕ ಉದಯ್ (28) ಮೃತ ದುರ್ದೈವಿ.
ಶಾಖದ ತೀವ್ರತೆಗೆ ಯುವಕನ ದೇಹ ಸುಟ್ಟು ಕರಕಲಾಗಿದೆ.ನಗರದ ಜಿಲ್ಲಾಸ್ಪತ್ರೆಗೆ ಮೃತದೇಹವನ್ನು ರವಾನಿಸಿದ್ದು ಮರಣೋತ್ತರ ಪರೀಕ್ಷೆ ಒಳಪಡಿಸಲಾಗಿದೆ.ಬಾಯ್ಲರ್ ಸರಿಪಡಿಸುವಾಗ ಏಕಾಏಕಿ ಹೊರ ಬಂದ 340 ಡಿಗ್ರಿ ಶಾಖ ಹೊರಬಂದ ಪರಿಣಾಮ ಘಟನೆ ನಡೆದಿದೆ. ಮಗನನ್ನು ಕಳೆದುಕೊಂಡ ತಾಯಿ ಶವಗಾರದ ಬಳಿ ಕಣ್ಣೀರು ಹಾಕುವ ದೃಶ್ಯ ಮನಕಲಕುವಂತಿತ್ತು.
- Advertisement -