- Advertisement -
- Advertisement -
ವಿಟ್ಲ: ಹಂದಿ ಹಿಡಿಯಲು ಅಕ್ರಮವಾಗಿ ಕರೆಂಟ್ ಬೇಲಿ ಹಾಕಿದ್ದು, ಇದ್ರಿಂದ ವಿದ್ಯುತ್ ತಗುಲಿ ಯುವಕನೊಬ್ಬ ಸಾವನಪ್ಪಿದ ಘಟನೆ ವಿಟ್ಲದ ಅಡ್ಯನಡ್ಕದ ಬಳಿ ನಡೆದಿದೆ.
ಅಡ್ಯನಡ್ಕದ ಬಳಿಯ ಎಣ್ಮಕಜೆ ಸಾಯ ಬಳಿಯ ನಿವಾಸಿ ನಾರಾಯಣ ಅವರ ಪುತ್ರ ಜಿತೇಶ್ ಮೃತ ಯುವಕ. ಕರೆಂಟ್ ಬೇಲಿ ಹಾಕಿದವರ ವಿರುದ್ಧ ಸ್ಥಳೀಯರು ಕ್ರಮಕ್ಕೆ ಆಗ್ರಹಿಸಿದ್ದಾರೆ. ಆಸ್ಪತ್ರೆ ಮತ್ತು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
- Advertisement -