Thursday, June 26, 2025
Homeಅಪರಾಧಕಳ್ಳನೋರ್ವ ವೃದ್ಧೆಯ ಜತೆ ಮನೆಯವರಂತೆ ನಟಿಸಿ ವೃದ್ಧೆಯ ಚಿನ್ನಾಭರಣ ಕದ್ದು ಪರಾರಿ

ಕಳ್ಳನೋರ್ವ ವೃದ್ಧೆಯ ಜತೆ ಮನೆಯವರಂತೆ ನಟಿಸಿ ವೃದ್ಧೆಯ ಚಿನ್ನಾಭರಣ ಕದ್ದು ಪರಾರಿ

spot_img
- Advertisement -
- Advertisement -

ಕೋಟ: ಇಲ್ಲಿನ ಪೊಲೀಸ್‌ ಠಾಣೆ ವ್ಯಾಪ್ತಿಯ ಮಣೂರಿನಲ್ಲಿ ಮಾ.20ರಂದು ಮನೆಯಲ್ಲಿ ವೃದ್ಧೆಯನ್ನು ಮಾತ್ರ ಬಿಟ್ಟು ಬೇರೆ ಯಾರು ಇಲ್ಲದ ಸಮಯದಲ್ಲಿ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳನೋರ್ವ ವೃದ್ಧೆಯ ಜತೆ ಮನೆಯವರ ಹಾಗೆ ಮಾತನಾಡಿ ಆಕೆಯ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ನಡೆದಿದೆ. ಸಂಭವಿಸಿದೆ.

ಚಿನ್ನ ಕಳೆದುಕೊಂಡವರು 92 ವರ್ಷದ ರುದ್ರಮ್ಮ ಎನ್ನಲಾಗಿದೆ.

ಘಟನೆಯ ವಿವರ: ಸ್ಥಳೀಯ ಕೊಯ್ಕೂರು ದೇಗುಲದ ಜಾತ್ರೆ ಮಾ.20ರಂದು ನಡೆದಿದ್ದು, ಈ ಜಾತ್ರೆಗೆ ಮನೆಯವರೆಲ್ಲ ವೃದ್ಧೆಯೋರ್ವರನ್ನು ಮಾತ್ರ ಮನೆಯಲ್ಲಿ ಬಿಟ್ಟು ತೆರಳಿದ್ದರು. ರುದ್ರಮ್ಮ ಒಬ್ಬರೇ ಮನೆಯಲ್ಲಿ ಮಲಗಿದ್ದು, ತನ್ನ ಚಿನ್ನದ ಸರವನ್ನು ಮಂಚದ ಮೇಲೆ ತೆಗೆದಿಟ್ಟಿದ್ದರು. ಈ ಸಂದರ್ಭದಲ್ಲಿ ಕಳನೋರ್ವ ಮನೆಗೆ ನುಗ್ಗಿ ಮನೆಯವರಂತೆಯೇ ಮಾತನಾಡಿದ್ದಾನೆ. ಈ ಘಟನೆಯು ಜಾತ್ರೆಗೆ ತೆರಳಿದ್ದ ವೃದ್ಧೆಯ ಅಳಿಯ ಶ್ರೀಧರ್‌ ಅವರು ಯಾವುದೋ ಕಾರಣಕ್ಕೆ ಮನೆಗೆ ದಿಢೀರ್‌ ವಾಪಾಸ್ ಬಂದಾಗ ಬಾಗಿಲನ್ನು ಒಡೆದಿರುವುದು ಕಂಡುಬಂದಿದೆ. ನಂತರ ಈ ಕುರಿತಂತೆ ವೃದ್ಧೆಯನ್ನು ವಿಚಾರಿಸಿದಾಗ ‘ಮನೆಗೆ ಯಾರೋ ಹುಡುಗ ಬಂದಿದ್ದ. ನನಗೆ ದೃಷ್ಟಿ ದೋಷವಿರುವುದರಿಂದ ಯಾರೆಂದು ತಿಳಿಯಲಿಲ್ಲ. ನಾನು ನೀವೇ ಬಂದಿರಬಹುದು ಎಂದು ತಿಳಿದುಕೊಂಡು ಜಾತ್ರೆ ಮುಗಿಯಿತಾ? ಹೇಗಾಯಿತು ಎಂದು ಆತನಲ್ಲಿ ವಿಚಾರಿಸಿದ್ದು, ಆತನೂ ಮನೆಯವರಂತೆಯೇ  ಮಾತನಾಡಿದ್ದ ಎಂದು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡು ಶ್ರೀಧರ್‌ ಮನೆಯನ್ನು ಹುಡುಕಿದಾಗ 30 ಗ್ರಾಂ ತೂಕದ ಚಿನ್ನದ ಸರ ಕಳವಾಗಿರುವುದು ಗಮನಕ್ಕೆ ಬಂತು.

ಇನ್ನು ಕಳ್ಳನು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ನೋಡಿ ಎಲ್ಲ ಚಿನ್ನಾಭರಣಗಳನ್ನು ಕದಿಯುವ ಉದ್ದೇಶದಿಂದ ಬಂದಿದ್ದು, ಶ್ರೀಧರ್‌ ದಿಢೀರ್‌ ಅವರು ಧಿಡೀರ್ ಆಗಿ ಮನೆಗೆ ಬಂದಿದ್ದರಿಂದ ಕೈಗೆ ಸಿಕ್ಕ ಸರವೊಂದನ್ನು ಮಾತ್ರ ತಗೊಂದು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಮನೆಯನ್ನು ಇನ್ನಷ್ಟು ಜಾಲಾಡಿರುತ್ತಿದ್ದರೆ ಉಳಿದ ಚಿನ್ನಾಭರಣಗಳೂ ಆತನ ಪಾಲಾಗುವ ಅಪಾಯವಿತ್ತು.

ಘಟನೆಯ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!